Friday 31 August 2018

ಶೂನ್ಯ ಏಕಾಂತ:



ತಲೆ ಕೆಡುತ್ತೆ!.. ಏನಿದರ ಅರ್ಥ!!, ಏನಿದೆ ಇದರಲ್ಲಿ!, ಜಗತ್ತು ನಮ್ಮದಲ್ಲದಿದ್ದರೂ ಅದು ನನ್ನದು, ಇದು ನನ್ನದು ಎಂದು ಹಾಕಿಕೊಂಡಿರುವ ಬೇಲಿ, ಬದುಕು, ಭಾವನೆ, ಕುರುಣೆ, ಸಂಬಂಧಗಳು, ಕಾರ್ಮೋಡಗಳು, ಭೂಮಿ, ಭಾನು, ಮಳೆ, ಚಳಿ, ಬಿಸಿಲು, ಬಾಗುವ ವಯಸ್ಸು, ಧಗಧಗಿಸುವ ದುಡ್ಡು, ಹಪಹಪಿಸುವ ಕಾಮ, ಅವಳ್ಯಾರದೋ ಟೈಟೆಡ್ ಲೆಗ್ಗಿಂಗ್ ತಳುಕು, ಪ್ರಿÃತಿ, ಚಟ, ಚಟ್ಟ, ತಮ್ಮ ಸುಖಕ್ಕಾಗಿ ಹೆತ್ತವರನ್ನ ರೋಡಲ್ಲಿ ಮಲಗಿಸುವ ಆಸೆ ಬುರುಕ ಮಕ್ಕಳ ಮನಸ್ಸು, ಗಾಳಿಯಲ್ಲಿ ತೇಲಾಡುವ ಹಕ್ಕಿ, ಕೂಳಿಗೂ ಗತಿಯಿಲ್ಲ ಎಂದು ನಾರುವ ಐನಾತಿ ಮೈಗಳ್ಳರು, ಸÀನ್ಯಾಸಿಯಾದವನು ದುಡಿದು ಹರಿಸುತ್ತಿರುವ ಹಣದ ಹೊಳೆ, ಎಷ್ಟೆÃ ಕೆಲಸ ಮಾಡಿದರೂ ಮೌಲ್ಯವೇ ಅರಿಯದೆ ಅಣಕಿಸುವ ಬಾಸ್ ಮಹಾಶÀಯರು, ಇನ್ನೊಬ್ಬರ ನೋವನ್ನು ಅರಿಯದ ಕುಬೇರರು, ದುಡ್ಡಿಗೆ ಕಣ್ಣಿಟ್ಟು ತೀರ್ಥ ನೀಡುವ ಅರ್ಚಕರು, ಕಂಗೆಡುವಂತೆ ಮಾಡುವ ಕೀಚಕರು, ರೆಡ್ ಲೈಟ್ ಏರಿಯಾದಲ್ಲಿ ದುಡ್ಡಿಗೆ ಮಲಗುವ ಸೂಳೆಯರು, ಲಾಂಗ್ ರನ್ ನಿರೀಕ್ಷೆಯಿಟ್ಟು ದುಡಿಯವ ಹಳ್ಳಿ ರೈತರು, ಕ್ಷಣಿಕ ಸುಖಕ್ಕಾಗಿ ಸೆರಗೊಡ್ಡುವ, ಪಂಚೆ ಸಡಿಲಿಸುವ ಕಾಮ ಬಾಕರು, ಎರಡೆರಡು ಪ್ರಿÃತಿಗೆ ಬಿದ್ದು ಅದೂ ಬಿಡಲಾಗದೆ, ಇದೂ ಹಿಡಿಯಲಾಗದೆ ಒದ್ದಾಡುವ ಪ್ರೆÃಮಿಗಳು, ಕುರ್ಚಿಯೇ ದೇವರೆನ್ನುವ ರಾಜಕಾರಣಿಗಳು, ರಕ್ತ ಹೀರುವ ರೌಡಿಗಳು, ಪ್ರಪಂಚ ಏನೂ ಅರಿಯದೇ ಕಿಲ ಕಿಲ ನಗುವ ಈಗತಾನೆ ಹುಟ್ಟಿರುವ ಮಗು. ಬದುಕೇ ಬೆತ್ತಲೆಂದರೂ, ಬೆತ್ತಲಲ್ಲಿ ಬಹುಬಗೆಯಲ್ಲಿ ಮಿಂದೆದ್ದದ್ದರೂ, ಹೊರಗೆ ತಾ ಮರ್ಯಾದಸ್ತ ಎಂದು ತೋರ್ಪಡಿಕೆ ಕಾಣುವ ತರುಣ-ತರುಣಿಯರ ಆಟಗಳು, ದೇವರ ನಂಬಿಕೆಯಲ್ಲಿ ಅವನನ್ನು ಕಾಣಲು ದೇವಸ್ಥಾನಕ್ಕೆ ಓಡುವ ಆಸ್ತಿಕರು, ಮನದಲ್ಲಿ ಕೆಂಡವಿಟ್ಟುಕೊಂಡು, ಹೊರ ಜನರಿಗೆ ತಾ ಬೆಣ್ಣೆ ಎಂದು ಬೀಗುವವರು, ಆ ಕಡೆ ಓಶೋ ತತ್ವ, ಈ ಕಡೆ ವಿವೇಕಾನಂದ ಸಾರತ್ವ, ಮತ್ತೊಂದೆಡೆ ನಿತ್ಯಾನಂದನ ಬಹುತ್ವ.., ಹೀಗೆ ಎಲ್ಲವೂ ಏಕೋ ಏಕಾಂತದಲ್ಲಿದ್ದಾಗ ಹೆಚ್ಚಾಗಿ ಕಾಡಿ, ಯಾವುದು ಸತ್ಯ!?, ಯಾವುದು ಮಿಥ್ಯ!?, ಯಾವುದು ಅನಂತ!?, ಯಾವುದು ಅಂತ್ಯ!? ಎನ್ನುವ ಗೌಜಿನಲ್ಲಿ ಮನಸ್ಸು ಅದೇನೋ ತಾತ್ಪರ್ಯವಿಲ್ಲದ ತತ್ವವನ್ನು ಕೆಕ್ಕರಿಸಿ ಓಡಿಸಿಕೊಂಡು ಹೋಗಿ ಹುಚ್ಚನನ್ನಾಗಿಸುತ್ತಿದೆ...

ಥೂ... ಏನಿದು!? ಯೋಚಿಸಲೇಬಾರದಿತ್ತು, ಆದರೂ ಯೋಚನೆ ಬರುತಿದ್ಯಲ್ಲಾ..! ಏನೇ ಯೋಚಿಸಿದರೂ, ಎಷ್ಟೆÃ ಸಂಪರ್ಕಕ್ಕೆ ಸಿಗದೇ ಓಡಾಡಿದರೂ ಉತ್ತರವೇ ಸಿಗದೆ, ಒಮ್ಮೆ ಸರಿ ಎನಿಸಿದ್ದು ಇನ್ನೊಮ್ಮೆ ತಪ್ಪೆನಿಸಿ, ಒಮ್ಮೆ ತಪ್ಪೆನಿಸಿದ್ದು, ಇನ್ನೊಮ್ಮೆ ಸರಿಯೆನಿಸಿ, ಅಂತಿಮವಾಗಿ ಸರಿ ಯಾವುದು!?, ತಪ್ಪಾö್ಯವುದು!!, ಎನ್ನುವ ನಿಲುವೇ ಸಿಗದೆ ಶೂನ್ಯಭಾವಕ್ಕೆ ಜಾರುವ ಮನಸ್ಸಿನ ಇಶಾರೆಯೇ ಈ ಗಾಳಿಯಂತಿರುವ ಬದುಕು... ಈ ರೀತಿ ನಿಮಗೂ ಅನಿಸಿದ್ದರೆ ಈ ಅಂಕಣ ಓದಿ.

ಬದುಕೇ ಹಾಗೆ ಕಳೆದುಕೊಳ್ಳುವ ವಿಷಯದಲ್ಲೆÃ ನಮ್ಮನ್ನು ಯಾವಾಗಲೂ ಭಯಪಡಿಸುತ್ತಿರುತ್ತದೆ. ಅದಕ್ಕಾಗಿ ಏನೇನೋ ಮಾಡುತ್ತೆÃವೆ, ಸತ್ಯವನ್ನೆÃ ಮರೆಮಾಚಿ ಸುಳ್ಳಿನ ಸರಪಳಿಯನ್ನೆÃ ಕಟ್ಟುತ್ತೆÃವೆ. ಎಲ್ಲವೂ ತನಗೇ ಬೇಕು ಎಂಬ ಅಹಂನಲ್ಲಿ ಒದ್ದಾಡುತ್ತಾ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಕೊಂಚವಾದರೂ ತಾಗಿರುವ ಧೂಳನ್ನು ಒರೆಸಿಕೊಳ್ಳುವ ಇರಾದೆಯಲ್ಲಿ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ ಚಪ-ಚಪ ಚಡಪಡಿಸುತ್ತೆÃವೆ. ಸರಿಯಾಗಿ ನೆನಪಿಟ್ಟುಕೊಳ್ಳಿ; ಬದುಕು ಎರಡು ಧ್ರುವಗಳಲ್ಲಿ ಅಸ್ತಿತ್ವವನ್ನು ಹೊಂದಿದ್ದರೆ, ಮನಸ್ಸು ಒಂದು ಧ್ರುವದಲ್ಲಿ ಇರುತ್ತದೆ. ಮನಸ್ಸಿನ ಅತಿಯಾದ ತರ್ಕಬುದ್ಧಿಯಿಂದ ಬದುಕು ಅಸಂಬದ್ಧವೆನಿಸುತ್ತದೆ. ಬದುಕು ಕ್ರೂರವೆನಿಸುತ್ತದೆ. ಅನೇಕ ಹೋಲಿಕೆಗಳು ಮನದಲ್ಲಿ ಗರಿಗೆದರಿದಾಗ 'ಅನಾಗರಿಕ ನಾನು' ಎಂಬ ಸಹಜ ಮೌಡ್ಯ ತಲೆಯಾವರಿಸಿ ಬದುಕು 'ತಿಳಿಗೇಡಿತನ'ವಾಗುತ್ತದೆ. ಈ ಅಸ್ತಿತ್ವಕ್ಕಿಂತ, ಬದುಕಿಗಿಂತ ದೊಡ್ಡ ತಿಳಿಗೇಡಿ ನಿಮಗೆಲ್ಲಿಯೂ ಸಿಗಲು ಸಾಧ್ಯವಿಲ್ಲ ಅದಕ್ಕೆ, 'ಚಲನೆಯನ್ನು ಸ್ಥಿರದಂತೆ ಮತ್ತು ಸ್ಥಿರವನ್ನು ಚಲನೆಯಂತೆ ಪರಿಗಣಿಸು', ಎಂದು ಓಶೋ ನುಡಿಯುತ್ತಾರೆ.

ಹೌದು! ನಾನು ಮೇಲೆ ಪ್ರಾರಂಭದಲ್ಲಿ ಬರೆದ ಒಂದಿಷ್ಟು ಪದಗಳು ನಿಮಗೆ ನೋವನ್ನು, ಮುಜುಗರವನ್ನು, ನಿಮ್ಮೊಳಗಿನ ಒಳ ಮನಸ್ಸಿನ ತಾತ್ಪರ್ಯಕ್ಕೆ ಸ್ಪರ್ಶವನ್ನು ನೀಡಿರಬಹುದು. ನನ್ನ ಪ್ರಕಾರ ಹಾಗೆ ಯೋಚಿಸುವುದು ತಪ್ಪಲ್ಲ. ಕೆಟ್ಟದ್ದು ಕೊಳಚೆ ಎಂದು ಕೊಂಡರೆ ನಮ್ಮ ಜನನವೂ ಆಗುತ್ತಿರಲಿಲ್ಲ ನೆನಪಿಟ್ಟುಕೊಳ್ಳಿ. ಈ ಯೋಚನಾ ಲಹರಿಗಳಿಗೆ ಸರಿಯಾದ ಉತ್ತರಗಳು ಸಿಗದಿದ್ದರೂ, ನಿಮ್ಮೊಳಗೆ ಹೊಸ ಜ್ಞಾನೋದಯ ಬೆಳೆಯಲು ಕಾರಣೀಭೂತವಾಗುತ್ತದೆ, ನಿಮ್ಮನ್ನು ಹೊಸ ನೆಲೆಗೆ ದಾಟಿಸುತ್ತವೆ ಮತ್ತು ನಿಮ್ಮ ಅಹಂಗಳ ಅರಿವಿಗೂ ದಾರಿಯಾಗುತ್ತದೆ ಎನ್ನುವುದರಲ್ಲಿ ಯಾವ ಮೌಢ್ಯವಿಲ್ಲ.


ಒಬ್ಬರು ವೃದ್ಧರಿರುತ್ತಾರೆ. ಅವರ ವೃದ್ಧಾಪ್ಯವನ್ನ ಸತ್ಯವೆನ್ನುತ್ತೆÃವೆ. ಆದರೆ ಸತ್ಯವೇನೆಂದು ನಮಗೆ ಸರಿಯಾಗಿ ತಿಳಿದೇ ಇರುವುದಿಲ್ಲ. ನಿಜವಾಗಿ ಹೇಳಬೇಕೆಂದರೆ ಯಾರೂ ವೃದ್ಧರಲ್ಲ, ಯಾರೂ ಯುವಕರಲ್ಲ. ಅಂತರಾಳ ಎನ್ನುವುದು ಎಂದಿಗೂ ಚಿರನೂತನ. ಕೇವಲ ಬಾಹ್ಯದ ಆಕಾರವು ಬದಲಾಗುತ್ತಿರುತ್ತದೆ ಅಷ್ಟೆ. ಈ ಶರೀರ ಕೇವಲ ಒಂದು ಉಡುಪು ಅಷ್ಟೆ. ಶೂನ್ಯ ಜಗತ್ತಿನಲ್ಲಿ ಉಂಟಾಗುವ ಬದಲಾವಣೆಗಳನ್ನು ನಾವು ಅಜ್ಞಾನದಿಂದ ಸತ್ಯವೆಂದುಕೊಳ್ಳುತ್ತಿದ್ದೆÃವೆ. ಸತ್ಯಕ್ಕಾಗಿ ಹುಡುಕಾಡಬಾರದು, ಅಭಿಪ್ರಾಯಗಳಿಗೆ ಅಂಟಿಕೊಳ್ಳಲೂಬಾರದು. ನಿಮಗನಿಸಿದಂತೆ ನೀವು ಯೋಚಿಸಿ, ನಿಮಗನಿಸಿದಂತೆ ಬದುಕಿ ಆದರೆ ಎರಡೂ ಉತ್ತಮ ಹಾದಿಯಲ್ಲಿರಲಿ.

ಸದಾ ವರ್ತಮಾನದಲ್ಲಿರೋಣ, ಕಟ್ಟ ಕಡೆÉಯ ಸಾಕ್ಷಾತ್ಕಾರ ಇದೆ ಎಂದು ನಂಬೋಣ. ಹೌದು-ಅಲ್ಲ, ಗೌಜು-ಗದ್ದಲ, ನಂಬಿಕೆ-ಬಂಧನ, ದುಃಖ-ದುಗುಡ ಬಿಟ್ಟರೆ ಬೇರೆ ಏನಿದೆ, ಎನೇ ಇದ್ದರೂ ಅದು ಅವನದಾಗಿರಲಿ, ನಮ್ಮ ಸಮಸ್ಯೆಗಳೆಲ್ಲ ದೇವರ ಸಮಸ್ಯೆಯಾಗಲಿ, ಬದುಕನ್ನು ಸಂತೋಷಿಸೋಣ, ಬಂದದ್ದನ್ನು ಬಂದಹಾಗೆ ಅನುಭವಿಸೋಣ, ಹಾಡಿ-ನರ್ತಿಸಿ ಭಾವೋತ್ಕರ್ಷಿಸೋಣ...
ಆದರೂ ಅದೇನೋ ಇನ್ನೂ ತಲೆಯೊಳಗೆ ಕೆರೆಯುತ್ತಿದ್ಯಾ!?
ಯಾವುದಕ್ಕೂ ಮತ್ತೊಮ್ಮೆ ಮೇಲಿಂದ ಓದಿ... ಬರೆದ ನನಗೂ ಯಾಕೋ ಮತ್ತೆ ತಲೆ ಕೆಡುತ್ತಿದೆ ಅನಿಸುತ್ತಿದೆ... ಇನ್ನೆÃನನ್ನೊÃ ಬೆನ್ನತ್ತಿ ಹೊರಡಬೇಕನ್ನಿಸುತ್ತಿದೆ... ಹೊರಡ್ತಿÃನಿ ಬೈ... ಬೈ..!

Tuesday 27 February 2018

ಧನ್ಯತೆಯ ವಿದಾಯ ನಿನಗೆ...

           
   8ಕ್ಕೂ ಅಧಿಕ ವರ್ಷದ ಕನಸದು, ಮುಂದೊಂದು ದಿನ ಕೈ ಹಿಡಿದರೆ ನಿನ್ನೆ ಹಿಡಿಯಬೇಕೆನ್ನುವ ಛಲವದು, ಮುಂಗಾಲಿನ ನನ್ನ ನಡೆಯ ಹಿಂದೆ ನಿನ್ನ ನಡೆಗೆ ದಾರಿ ತೋರಿ ಸಪ್ತಪದಿ ತುಳಿಸಿಕೊಂಡು ಮನೆಯ ಹೊಸ್ತಿಲ ಮೇಲೆ ಸೇರನ್ನಿಟ್ಟು ಅಕ್ಕಿ ತುಳಿಸಿ, ಮನೆ-ಮನೆತನದ ಬೆಳಕಿನ ಜೊತಗೆ ಈ ದೀಪನಿಗೂ ಪ್ರಜ್ವಲಿಕೆಯ ಬೆಳಕನ್ನಾಗಿಸಿಕೊಳ್ಳಬೇಕೆಂಬ ಕುರುಡು ಆಸೆಯದು, ಪರಿಸ್ಥಿತಿಯ ಗಾಳದಲ್ಲಿ ಮುಂದೊಂದು ದಿನ ಬರುತ್ತೆ ಆಗ ನೀ ನನ್ನ ಮದುವೆಯಾಗ್ತೀಯಾ ಎಂದು ಕೇಳೋಣವೆನ್ನುವ ಹೆವಿ ಕಾನ್ಫಿಡೆನ್ಸ್‍ನ ಕಂಪು ಅದು, ಶುರುವಾದಾಗಿನಿಂದ ಇಲ್ಲಿಯವರೆಗೂ ಮೈಗೆತ್ತಿಕೊಂಡ ಬರವಣಿಗೆಯಲ್ಲಿ ಮನವರಿಕೆ ಮಾಡುವೆ ಎನ್ನುವ ಅಮಾಯಕ ಗೀಚುದು, ನೀ ಎದುರು ಬಂದಾಗ ಒಳಗಿದ್ದ ಹೇಳಲಾರದ ತಳಮಳಗಳು ಒಟ್ಟಿಗೆ ಥಂಡಿಗೇರಿಸಿ ನಡುಗಿಸಿದ ನಲ್ಮೆಯದು, ದೂರಿಂದ ನಿನ್ನ ನೋಡಿ ಖುಷಿಪಡುತ್ತಿದ್ದ ಮನದಂದವದು, ಭಾವಗಳ ತೋಳ್ತೆಕೆಯಲ್ಲಿ ಅದೆಷ್ಟೋ ರಾತ್ರಿ ಕನಸಿನಲೇ ನಿನ್ನಿಯನಾಗಿ ರಾಜ್ಯವಾಳಿದ ಕುಬೇರ ಸುಖವದು, ನನ್ನೆಲ್ಲಾ ಸಾಧನೆ ಮುಗಿದ ಬಳಿಕ ನಿನ್ನೆದುರು ಬಂದಾಗ ಓಡಿ ಬಂದು ತಬ್ಬಿಕೊಳ್ಳುತ್ತಿಯಾ ಎನ್ನುವ ಆಶಾದಾಯಕದ ಕನಸದು, ಕಷ್ಟವಾಗಲಿ-ಸುಖವಾಗಲಿ ಸಿಕ್ಕೇ ಸಿಗುವೆ ಎಂದು ಅತಿಯಾಗಿ ಹಚ್ಚಿಕೊಂಡ ಆತ್ಮೀಯತೆಯದು...

           
ಸಾಕಾಗಿಲ್ಲ ಅನ್ನಿಸುತ್ತೆ!,, ಎಸ್... ಎಷ್ಟು ವರ್ಣಿಸಿದರೂ, ಎಷ್ಟು ಬರೆದರೂ, ಎಷ್ಟೆಲ್ಲಾ ಹಲುಬಿಕೊಂಡರೂ ಈ ಕ್ಷಣಕ್ಕೆ ಎಲ್ಲವೂ ಶೂನ್ಯ ಯಾಕೆಂದರೆ ನೀನಿಲ್ಲ... ಇನ್ಮುಂದೆ ನನ್ನ ತೋಳ್ತೆಕ್ಕೆಯಲ್ಲಿ ನೀನಿರುವುದಿಲ್ಲ.., ಹೌದು ನೀನಿರಲ್ಲ!..

           ನಿಜ! ನನಗೆ ಈ ಬರವಣಿಗೆ ಕಲಿಸಿದವಳೆ ನೀನಲ್ವಾ!? ಯಾರಿಗೆ ಯಾರು ಸ್ಫೂರ್ತಿಯಾಗುತ್ತಾರೋ ನಾ ತಿಳಿಯೇ!, ಆದರೆ ನನಗಂತೂ ನೀನೇ ಸ್ಪೂರ್ತಿ ಕಣೋ... ಅನೇಕರ ನಿರೀಕ್ಷೆಯ ಮುಂದೆ ಇಂದಿಲ್ಲಿ ನಾನು ರಹದಾರಿಯಲ್ಲಿ ಕ್ರಮಿಸಿ ಸಾಗುತ್ತಿರಬಹುದು ಆದರೆ ಒಮ್ಮೆ ಹಿಂದಿರುಗಿ ನೋಡಿದರೆ, ಅಕ್ಕಪಕ್ಕ ಇಣುಕಿ ನೋಡಿದರೆ ಸನಿಹ ಖಾಲಿ ಖಾಲಿ...  ಉಳಿದಿದೆ ಒಂಟಿಪಯಣದ ಜೋಲಿ...

          ಇನ್ನೇನು  ಮಾಡಲಾಗದು, ಎಲ್ಲವೂ ವಿಧಿಬರಹ..! ಆ ಬರಹದಲ್ಲಿ ನೀನೊಂದು ಪಾತ್ರ..! ಅನುಕ್ಷಣವೂ ಸನಿಹವೇ ಇರುತ್ತಿಯಾ ಅಂದುಕೊಂಡ ಅಕ್ಷರಗಳಿಗೆ ಪೂರ್ಣವಿರಾಮ. ಗೀಚಲ್ಲಿ ಕಂಡಿದ್ದ ಪಾತ್ರಗಳಿಂದ ಮರೆಯಾಗಿ ಮಾಪನವೇ ಇಲ್ಲದೆ ದೂರಾಗಿ ವಿಧಿಯಲ್ಲಿ ಬರೆದಿಲ್ಲ ಎಂದು ಸಾಲನ್ನು ನುಂಗಿ ಕೊನೆಗಾಣಿಸಿವೆ ಎಂದರೆ ನೀನೊಪ್ಪುತ್ತೀಯಾ!?

           
 ತಪ್ಪಿಲ್ಲ. ಆಗ ನೀನು ಪಿ.ಯು.ಸಿ  ಓದುತ್ತಿದ್ದೆ. ನನ್ನದು ಅದೇ ಪಿ.ಯು.ಸಿ ಸ್ಟಡಿಯಾದರೂ ಇಬ್ಬರದ್ದೂ ಬೇರೆ ಬೇರೆ ಕಾಲೇಜ್. ಆದ್ದರಿಂದ ಮನೆಯವರ ಪರಿಚಯ ಬಿಟ್ಟರೆ ನನಗೆ ನಿನ್ನ ಯಾವ ಒಳಪರಿಚಯ ಆಗಲಿ, ಹೊರ ಪರಿಚಯವಾಗಲಿ, ನಗುವಿನ ಪರಿಚಯವಾಗಲಿ ಇರಲೇ ಇರಲಿಲ್ಲ.

        ಒಂದು ಮಾತನ್ನು ಹೇಳುತ್ತೀನಿ ಕೇಳು.., ನನ್ನಯ ಪರೀಧಿಯ ಪುಸ್ತಕದಲ್ಲಿ ನೀನು ಯಾವಾಗಲೂ ಬೀಡು ಬಿಟ್ಟಿರೋ ಶಿಲಾಕಲ್ಲು. ಹತ್ತಾರು ಬಾರಿ ಮಾತನಾಡಿಸಬೇಕೆಂದರೂ, ಹೇಳಬೇಕೆಂದರೂ ಆಗದ ಒತ್ತಡಕ್ಕೆ ಸಿಲುಕಿದ ಮೂಖಪ್ರಾಣಿ ನಾನು. 

          ಸದ್ಯ ನಿನ್ನ ಕಾಲ್ತೊಳೆದು ಬೀಳ್ಕೊಡಬೇಕಾದ ಸಮಯ ನನ್ನಯ ಪಾಲಿಗೆ ಒದಗಿರುವುದು ಕಣ್ಣಂಚಲಿ ಹನಿ ನೀರು ಮೂಡಿಸಿದೆ.  ಚಿಂತೆಯಿಲ್ಲ!!, ಕೊನೆಯ ಮಾತೆನ್ನುವಂತೆ ನೀನಾಡಿದ ಒಂದೆರಡು ಮಾತೇ ನನ್ನಯ ಇಂಪಿನ ಬಾಳ್ವೆಯ ತೆಕ್ಕೆಯಲ್ಲಿ ಪದೆ ಪದೇ ಲಹರಿಯಾಗಿ ಹರಿಯುತ್ತಲೇ ಇದೆ. ಅದೆಂದಿಗೂ ಇರುತ್ತದೆ.

         ಅಳುವಿದೆ, ಬೇಜಾರಿಲ್ಲ ಅಪ್ಪಿ!.. ಎಲ್ಲಿದ್ದರೂ ಸುಖವಾಗಿರು... ಗಳೆತನಕ್ಕೆ ಪ್ರತಿ ಜನ್ಮವೂ ಜೊತೆಯಾಗಿರು...

           
ಅಂದು ನೀ ನನ್ನ ಕಣ್ಣಿಗೆ ಬಿದ್ದಾಗಲೂ ನಾನು ಶೂನ್ಯನಾಗಿದ್ದೆ, ನಡುವೆ ನಿನ್ನ ಪಡೆಯಬೇಕೆನ್ನುವ ಹಂಬಲದಲ್ಲಿ ಒಂದಿಷ್ಟು ಪಡೆದ ಸ್ವರ ಸ್ಥರದಲ್ಲಿದ್ದೆ. ಆದರೆ ಇಂದು ನೀ ಹೊರಡುವ ಸಮಯ ಬಂದಿದೆ.  ಆಶ್ಚರ್ಯವೆಂದರೆ ಗೊತ್ತಿಲ್ಲದೇ ಮತ್ತೆ ಶೂನ್ಯನಾಗಿ ಬಿದ್ದಿದ್ದೇನೆ!. ಚಿಂತೆಯಿಲ್ಲ!.. ಏಳು-ಬೀಳು ಬಂದರೆ ಬದುಕು ಗಡಸಾಗಿರುತ್ತೆ ಎಂದು ಹಿರಿಯರು ಹೇಳುತ್ತಾರೆ ಅದು ನಿಜವೂ ಕೂಡ. ಆದರೇನು ಮಾಡಲಿ ಅಂದೆಲ್ಲಾ ನೀ ನನ್ನೊಳಗೆ ಸ್ಫೂರ್ತಿ ಚಿಲುಮೆಯಾಗಿದ್ದೆ ಇಂದು ನೀನೇ ಇಲ್ಲದ ಶೂನ್ಯ ಸಂಪಾದನೆಯ ಬಾಳಲ್ಲಿ ಮತ್ತೆ ಎದ್ದೇಳುವುದು ಹೇಗೆ!?, ಏಳ್ತೀನಾ!?, ಬೀಳ್ತೀನಾ!?, ಸಾಯ್ತೀನಾ!? ಒಂದೂ ನಾ ಅರಿಯೆ...

"ಒಂದಂಕ್ಕಿ ಕಾಳಿಗೂ ನೀ ಬೇಕು ಊಟವಿಕ್ಕಲೂ,
ಪ್ರತಿ ಕ್ಷಣಗಳೂ ಕಾಯುತಿವೆ ನಿನ್ನಯ ಸೋಂಕಿಗೆ ಸೋಕಲು...
ಮೈ ರೋಮಗಳ ನಡುಗುವಿಕೆಗೆ ಭಯವಿದೆ ಇಂದಿಗೂ,
ನಲುಮೆಗಳು ಕೇಳುತಿವೆ ಇನ್ನ್ಹೇಗೆ ನಾ ಜೀವ ಪಡೆಯಲಿ ವೈಯಾರಿಸಲು...”
                                                                                                                             ಎಂದಿಗೂ ನಿನ್ನವ,
                                                         - ಸಂದೀಪ್ ಶೆಟ್ಟಿ ಹೆಗ್ಗದ್ದೆ

Monday 26 February 2018

ಮೌನ ಕೊರೆಯಿತು...



(ಹಾಯ್.., ಹೆಲೊ.., ನಮಸ್ಕಾರ ಪ್ರೇಮಿಗಳ ದಿನದ ವಿಶೇಷವಾದ ಪೇಮಾಯಣ ಕಾರ್ಯಕ್ರಮಕ್ಕೆ ಆತ್ಮೀಯವಾದ ಸ್ವಾಗತ ನಾನು ಸಂದೀಪ್ ಶೆಟ್ಟಿ ಹೆಗ್ಗದ್ದೆ...

ಕಳೆದ ತಿಂಗಳ ಧನ್ಯತೆಯ ವಿದಾಯದ ಮುಂದಿನ ಭಾಗ ಇದು...ಪ್ರೇಮಾಯಣ ಭಾಗ 2 ಮೌನ ಕೊರೆಯಿತು...ಕೇಳಿ ಕೇಳಿಸಿ... ನಿಮ್ಮಲ್ಲೂ ಈ ರೀತಿಯ ಪ್ರೀತಿ ಕಥೆಗಳಿದ್ದರೆ ನಮ್ಮ ವ್ಯಾಟ್ಸಾಪ್ ಸಂಖ್ಯೆಗೆ ಬರೆದು ಕಳಿಸಿ... ನೆನಪಿರಲಿ ಇದು ಸಿರಿ ಮೊಬೈಲ್ ಟಿವಿಯ ಪ್ರಸ್ತುತಿ
ನಮ್ಮ ವ್ಯಾಟ್ಸಾಪ್ ಸಂಖ್ಯೆ : 9611976709)



           
ಅದು ನನ್ನ  ಅವಳ ಕೊನೆಯ ಭೇಟಿ... ಇದು ಅವಳಿಗಾಗಿ ಅಂದುಕೊಳ್ಳುತ್ತಿರುವ ಕೊನೆಯ ಅಂಕಣ... ಇನ್ನೂ ಮುಂದೆಯೂ ಅಕ್ಷರಗಳ ಮೆರವಣಿಗೆ ನೀರಿನಂತೆ ಹರಿದರೆ ನಾನೇನು ಮಾಡಲಾಗದು...
ಮುದ್ದು ಗೆಳತಿ!! ನೀನೂ ಕೂಡ ಕ್ಷಮಿಸು ನನ್ನ, ಯಾಕೆಂದರೆ ಈ ಹಿಂದೆಯ ಅಂಕಣದಲ್ಲೂ ಧನ್ಯತೆಯ ವಿಧಾಯವೆಂದು ಬೀಳ್ಕೊಂಡು ಅದೇ ಕೊನೆಯದು ಎಂದು ಅರುಹಿಯೂ ಇನ್ನೊಂದು ಅಂಕಣ ನಿನ್ನ ಮುಂದಿಡುತ್ತಿರುವೆ... 

       ನಾನೇನ್ ಮಾಡ್ಲಪ್ಪಿ, ಆಗ್ತಿಲ್ಲ ನಂಗೆ... ನೀನೇನೆ ಹೇಳಿದರೂ, ಯಾರೇನೇ ಅರುಹಿದರೂ, ನೀ ನನ್ನೊಳಗೆ ಪ್ರತಿ ಸಲವೂ ಹೊಸಬಗೆಯ ತಲ್ಲೀನತೆ ಕೊಟ್ಟು ಮತ್ತೆ ಮತ್ತೆ ಬರೆಸುತ್ತಿರುವೆ... ಪ್ಲೀಸ್ ಅಪ್ಪಿ ಕ್ಷಮಿಸು... ಇದೊಂದು ಲೇಖನವನ್ನ ಒಡಲಿಗೆ ಅರ್ಪಿಸು...

   ಮೊದಲೇ ಅಂದುಕೊಂಡಂತೆ, ನಮ್ಮಿಬ್ಬರದೂ ಅದು ಕೊನೆಯ ಭೇಟಿ ಮಾಮೂಲಾಗಿ ಇಬ್ಬರಲ್ಲೂ ಯಾವ ಆಡಂಬರವಿಲ್ಲದಿದ್ದರೂ, ಆ ದಿನ, ಆ ಭೇಟಿ ನನಗೆ ಹೊಸ ಸಂಭ್ರಮ ಬಿತ್ತಿತ್ತು. ಅದರ ಮುಂದೆ ಯಾವ ಮನೋರಂಜನೆಯು ನಿಲ್ಲದು ಕಣೆ , ಅಂತಹÀ ಮೇಳೈಕೆ ಅದು. ಆ ಸಂಭ್ರಮ, ಆ ಏಕಾನತೆ, ಆ ಮೇಳೈಕೆ ನಿನಗೂ ಗೊತ್ತಿರಬಹುದು, ಕೇವಲ ನಿನಗೆ-ನನಗೆ ಮಾತ್ರಾ ಏನು ಮಹಾ, ಪ್ರೀತಿಸುವ ಪ್ರತಿಯೊಬ್ಬನಿಗೂ ಗೊತ್ತಿರುತ್ತದೆ...

     ಕೈ ನಡುಗುತಿದೆ, ಸ್ವರ ಕಂಪಿಸುತಿದೆ, ಬಟ್ಟೆ ಬರೆಯೆಲ್ಲಾ ಖಡಕ್ ಐರನ್ ಹಾಕೊಂಡು ಮೈಗೊತ್ತಿಕೊಂಡಿದೆ. ಎಂದೂ ಕನ್ನಡಿ ಕಾಣದ ಮುಖ, ಬಿಂಬದಲ್ಲಿ ಹೊಸತನವನ್ನು ಅರಸುತ್ತಿದೆ, ಲಲನೆಯ ಕೆನ್ನೆಗೆ ಕ್ರೀಮ್ ಬೇಕು ಎಂದು ಕೈ, ಎದುರಿದ್ದ ಮೇಕಪ್ ಕಿಟ್‍ನ್ನ ತಡಕಾಡಿದೆ, ಎಂದೂ ಇಲ್ಲದ ಕೊನೆಯ ಭರವಸೆ ಪ್ರೀತಿ ಅರುಹಲು ತುದಿಗಾಲಲ್ಲಿ ಕುಂತಿದೆ, ಅಕ್ಕಪಕ್ಕ ನೋಡಿದ್ದೆಲ್ಲಾ ಸುಂದರವಾಗಿ ಸವಿಯೆನಿಸತೊಡಗಿದೆ. ಎಕೋ ಏನೋ ಹೊಸಬಗೆಯ ಇತಿಹಾಸವೊಂದು ಸೃಷ್ಟಿಯಾಗಿ ಪುಟ ಸೇರುತ್ತೆ ಎನ್ನುವ ಖುಷಿ, ಬೇಸರ, ನಲ್ಮೆ ಎಲ್ಲವೂ ಗರಿಗೆದರಿದೆ. ಒಂಥರಾ ಭಯ, ಒಂಥರ ನಡುಕ, ಒಂಥರಾ ಸೋಜಿಗ, ಅಯ್ಯೋ, ಅಯ್ಯೋ.., ಅವೆಲ್ಲಾ ಈಗ ಹೇಗೆ ವರ್ಣಿಸಲಿ ಗೆಳತಿ... ಎಲ್ಲವೂ ವರ್ಣಾನಾತೀತ ಬಿಡು... 

   
 ನನ್ನ ನಿನ್ನ ಪ್ರೀತಿಯೊಂಥರ ಲಾಲಿಯ ಜೋಲಿ ಇದ್ದಹಾಗೆ. ಒಂದು ಬಾರಿ ಕೈಲಿರುತ್ತೆ, ಇನ್ನೊಂದು ಬಾರಿ ಕೈ ತಪ್ಪುತ್ತಿರುತ್ತೆ.  ನೀನು ಹಾಗೆ ಬಿಡು, ತೂಗಿ ತೂಗಿ ಕೊನೆಗೂ ಕೈಬಿಟ್ಟು ಹೋಗುತ್ತಿರುವೆಯಲ್ಲಾ, ಮದುವೆಯಾದ ಮೇಲೆ ಸಿಗುತ್ತಿಯೋ ಇಲ್ಲವೋ ಗೊತ್ತಿಲ್ಲ.  ಆದರೆ ಇವತ್ತು ಮಾತ್ರಾ ಸಿಗುತ್ತಿರುವೆ, ಎಸ್...ಇವತ್ತು ನಮ್ಮ ಭೇಟಿ...
ಅದಕ್ಕೆ ಈ ದಿನಕ್ಕೆ 'ಪ್ರೀತಿ ದಿನ' ಎಂದು ಹೆಸರಿಟ್ಟಿರುವೆ. ಇಂದು ನನ್ನ ದಿನ ಬಿಡು ಎಂದುಕೊಳ್ಳುವಾಗಲೇ ಸಿಗ್ನಲ್ ಬಿತ್ತು. ಅಯ್ಯೋ ನಾನು ಅದೆಂತಹ ಹುಚ್ಚ ನೋಡು!, ಬೈಕಲ್ಲಿ ನಿನ್ನ ಬಳಿ ಬರುತ್ತಿರುವುದನ್ನೇ ಮೈಮರೆತಿದ್ದೆ. ಎಲ್ಲಿಯೂ ನಿಲ್ಲದವ ಸಿಗ್ನಲ್‍ನಲ್ಲಿ ನಿಂತ ಎನ್ನುವಂತೆ ಕಾತರಿಕೆಯ ಚಡಪಡಿಕೆಯಲ್ಲೇ ಅವಸರಿಕೆಯಲ್ಲೇ ಪ್ರತಿ ಸೆಕೆಂಡ್‍ಗೂ ವ್ಯಾಲ್ಯೂ ಇದೆ ಎನ್ನುವಂತೆ ಮುಂದಿನ ಕ್ಷಣಗಳನ್ನ ನಿನ್ನ ಜೊತೆ ಕಳೆಯುತ್ತೀನಲ್ಲ, ಅದು ಬೇಗ ಬರಲಿ ಎಂದು, ನಿನ್ನ ಬಳಿ  ಬಂದು ಕುಳಿತುಕೊಳ್ಳುವ ಅವಕಾಶ ಬಹಳ ಬೇಗ ದೊರಕಲಿ ಎನ್ನುವ ಮನದಿಂಗಿತದಲ್ಲಿ ಬೇರ್ಯಾವ ದಾರಿಯೂ ಅಡ್ಡಗಟ್ಟುವುದು ಬೇಡ ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೆ.

ಅಂತೂ ಇಂತೂ ವರ್ಷದಿಂದ ಕಾದಿದ್ದ ನಮ್ಮ ಭೇಟಿಗೆ ಅಮೂಲ್ಯ ಕ್ಷಣ ಬಂದೆ ಬಿಟ್ಟಿತ್ತು. ನೀ ಎದುರು ಬಂದಾಗ ಗೆಳತಿ ಎನ್ನುವ ನನ್ನ ಸುಂದರ ಪ್ರೀತಿಯ ಮಾತಿಗೆ ಆ ನಿನ್ನ ಗುಂಡು ಮೊಗದಲ್ಲಿ ನಗು ಬೀರಿತ್ತು... ಯಾಕೋ ಗೊತ್ತಿಲ್ಲ ಅಪ್ಪಿ, ಫೋನ್‍ನಲ್ಲಿ ಮಾತನಾಡುವಾಗ ಇದ್ದ ಧೈರ್ಯ ನೀ ಎದುರು ಬಂದಾಗ ಇರುವುದೇ ಇಲ್ಲ. ಎಲ್ಲವೂ ಗುಹಾಂತರವಾಗುತ್ತದೆ. ಹೇ! ಯಾಕೋ ಗಂಟಲಲ್ಲಿ ಏನು ಮಾತೇ ಹೊರಬೀಳುವುದಿಲ್ಲ, ಮೊದಲೆಲ್ಲ ನಿನ್ನ ನೋಡಿದಾಗ ಕಂಪಿಸುತ್ತಿದ್ದ, ಆ ಭಯ ಇನ್ನೂ ನನ್ನ ಬಿಟ್ಟಿಲ್ಲ ಅನ್ಸುತ್ತೆ. ಇಷ್ಟು ದಿನ ಮನದಲ್ಲಿದ್ದ ಪ್ರೀತಿಯನ್ನ ಇವತ್ತಾದರೂ ಹೇಳುತ್ತೇನೆಂದುಕೊಂಡು, ಕೊನೆಯ ಭೇಟಿಯಲ್ಲಾದರೂ ಆ ನನ್ನ ಅಮರ ಪ್ರೀತಿಯನ್ನ ಅರುಹಿ ಹೋಗುವೆ ಎಂದೂ, ಒಪ್ಪದಿದ್ದರೂ ಅಪ್ಪಿಕೊಳ್ಳಬಹುದೇನೋ ಎಂದು ಕೊಂಡಿದ್ದ ಎಲ್ಲಾ ಆಸೆ, ಭಾವಗಳೆಲ್ಲ ಕೆಂಡಮಂಡಲವಾಗಿ ಸುಟ್ಟುಕರಕಲಾದಂತೆ ವಿಷಪ್ರಾಶನದಲ್ಲಿ ಮಡಿದಂತೆ ಮಲಗಿಯೇ ಬಿಟ್ಟಿದ್ದವು...

     
ಇಂದು ನಿನಗೆ ಬೇರೊಬ್ಬನ ಜೊತೆ ಮದುವೆ ಫಿಕ್ಸ್ ಆಗಿದ್ದು ತಿಳಿದು ಕೊನೆಯ ಬಾರಿ ನೋಡಿಕೊಂಡು, ನನ್ನೊಳಗಿದ್ದ ಪ್ರೀತಿನಾ ಹೇಳಿಕೊಂಡು ಎಲ್ಲಿದ್ದರೂ ಚೆನ್ನಾಗಿರು ಎನ್ನುವ ನಲ್ಮೆಯ ವಿದಾಯ ಗೀಚೋಣವೆಂದುಕೊಂಡಿದ್ದ ಮಾತಿನ ಭರವಸೆ ಕೊನೆಗೂ ಸುಳ್ಳಾಗಿ ಹೋಯಿತು. ನನ್ನ ಭುಜತಟ್ಟಿ ಮಾತಾಡು ಮಾತಾಡು ಎನ್ನುತ್ತಿದ್ದ ನಿನ್ನ ತುಟಿಯಂಚಲಿ ಹೊರಬರುವ ಪುಣ್ಯಪಡೆದ ಮಾತುಗಳು ಕೇಳುತ್ತಿದ್ದವೇ ಹೊರತೂ ಒಂದೂ ಮಾತು ನನ್ನ ಸ್ವರಕೋಶದಿಂದ ಹೊರಬೀಳಲೇ ಇಲ್ಲ.
ವಾತಾವರಣ ಹದಮಾಡುತಿದೆ, ನಿನ್ನ ಸನಿಹ ಮತ್ತೆ ಮತ್ತೆ ಮನಸನ್ನ ಸೆರೆಯಲಿ ಬಚ್ಚಿಟ್ಟಂತಿದೆ, ಮಾತನಾಡಲು ಕುಳಿತುಕೊಳ್ಳಲು ನೆಪವೆಂದುಕೊಂಡು ತರಿಸಿಕೊಂಡಿದ್ದ ಐಸ್ ಕ್ರೀಮ್ ಮನದ ಧಗ ಧಗಿಸುವಿಕೆಗೆ ಕುದಿದು, ನನ್ನ ಒಳಮನಸಿನಂತೆ ನೀರಾಗಿ ಹರಿಯುತಿದೆ... ದೂರದ ಅನಂತದಿಂದ ಮನದ ಮೂಲೆಯ ಸ್ವರವೊಂದು ಕಂಪಿಸುತ್ತಾ ಕೇಳಿದೆ ಕಾಲ್ತೊಳೆಯಲೇ, ನಿನ್ನ ಕೈ ನಡೆಯಲೇ.., ಅಥವಾ ಹಿಡಿದ ಕೈ ಬಿಟ್ಟು ಹೃದಯ ಒಡೆದುಕೊಳ್ಳಲೇ...

    ಪ್ರಶ್ನೆಗಳು ಸಾವಿರಾರು ಎದ್ದಿವೆ... ದಿಕ್ಕೇ ಇಲ್ಲದ ದೋಣಿಯ ಬಾಳಂತೆ ಉತ್ತರವೇ ಸಿಗದೇ ಒದ್ದಾಡಿವೆ... ಒಂದು ಕಡೆ ಅನುಕಂಪ, ಇನ್ನೊಂದು ಕಡೆ ಪ್ರೀತಿ ಬಿಂಬ, ಮಗದೊಂದು ಕಡೆ ಅನ್ಯತಾ ಬಂಧ... ಕೊನೆಗೂ ಇನ್ನೊಬ್ಬರ ತೆಕ್ಕೆಗೆ ನಿನ್ನರ್ಪಿಸುವ ಗೊಂದಲ... ಅಷ್ಟಾದರೂ ಮತ್ತೆ ಮತ್ತೆ ನಿನ್ನೇ ಕನಿಕರದಿಂದ ಕಾಣುವ ಮನದಂದ... ಎಲ್ಲದರ ನಡುವೆ ಬಡಪಾಯಿಯಾಗಿ ಕುಳಿತು ಎದ್ದವ ನಿರಾಶೆಯ ವಿಧಾಯವಿತ್ತು ತೆರೆಕಾಣುವ ಕೆಂಪನೆಯ ಸೂರ್ಯನ ಬಿಂಬ ನೋಡಲು ಕಡಲತಡಿಗೆ ಬೈಕ್ ಚಲಿಸಿದ್ದೆ... ಮೌನ ಅಲೆಯಂತೆ ಕೊರೆಯುತ್ತಿತ್ತು...
                                                                         - ಸಂದೀಪ್ ಶೆಟ್ಟಿ ಹೆಗ್ಗದ್ದೆ

Sandeep Shetty Heggadde 2018 New Photos






Friday 5 May 2017

sandeep shetty heggadde images


















ಗೋಲ್ಡನ್ ಸಿಂಗರ್ ಸೋನುನಿಗಮ್...


ಹೌದು... ನಿಜಕ್ಕೂ ಆತ ಗೋಲ್ಡನ್ ಸಿಂಗರ್...
ಖ್ಯಾತ ಗಾಯಕ ಸ್ವರಮಾಂತ್ರಿಕ ಎಸ್.ಪಿ.ಬಿ ಹೇಳಿದಂತೆ ಆತನದ್ದು ದೇವರ ಸ್ವರ... ಅವನಿಗದು ದೇವರು ಕೊಟ್ಟ ವರ...


       ಆತನೊಬ್ಬ ಗಾಯಕ, ನಟ, ಸಂಗೀತ ನಿರ್ದೇಶಕ, ಟೆಲಿವಿಷನ್ ಪ್ರಸೆಂಟರ್, ರೇಡಿಯೋ ಜಾಕಿ, ಕಾರ್ಯಕ್ರಮ ನಿರೂಪಕ... ಅಬ್ಬಾಬ್ಬಾ!.. ಪಟ್ಟಿ ಮಾಡಿದರೆ ಎಲ್ಲದರಲ್ಲೂ ಕೈ ಆಡಿಸಿ ಸೈ ಎನಿಸಿಕೊಂಡ ಮಹಾನ್ ಪ್ರತಿಭಾವಂತ. ಹಿಂದಿ, ಪಂಜಾಬಿ, ಕನ್ನಡ, ಬಂಗಾಳಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಹೀಗೆ ಹತ್ತು ಹಲವು ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿರುವ ಹಿನ್ನೆಲೆ ಮಾಂತ್ರಿಕ. ಅನೇಕ ವರ್ಷಗಳ ಹಿಂದೆಯೇ ಕನ್ನಡಕ್ಕೆ ಬಂದು, ತನ್ನ ಗಾನ ಸುಧೆಯನ್ನು ಹರಿಬಿಟ್ಟಿದ್ದರೂ, ಅಪ್ಪಟ ಮನೆ ಮನೆಯ-ಮನಮನದ ಹುಡುಗ ಆಗಿ ಹಾಡಿನ ಮಳೆಯಲ್ಲಿ ಪ್ರತಿ ಕನ್ನಡಿಗನ ಸೋನ ಆಗಿದ್ದು, ‘ಮುಂಗಾರು ಮಳೆ’ ಚಿತ್ರದ ‘ಅನಿಸುತಿದೆ ಯಾಕೋ ಇಂದು’ ಎಂದು ಹಾಡಿದ ಮೇಲೆಯೇ... ಅವನೇ ನನ್ನ ನೆಚ್ಚಿನ, ನನ್ನ ಜೀವನದ ಅತ್ಯಮೂಲ್ಯವಾದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರಾದ, ನನ್ನ ಇಂದಿನ ಹಾಡುಗಾರಿಕೆಗೆ, ಸಂಗೀತಕ್ಕೆÉ ಸ್ಫೂರ್ತಿಯ ಚಿಲುಮೆಯಾದ ಗಾಯಕ ಸೋನು ನಿಗಮ್.

ಚಿಕ್ಕಂದಿನಿಂದಲೂ ಕಾರ್ಯಕ್ರಮದಲ್ಲಿ, ಟಿ.ವಿ ಶೋಗಳಲ್ಲಿ ಹಾಡುತ್ತಿದ್ದ ಸೋನು ಕೇವಲ ಹಾಡುಗಾರಿಕೆಯಲ್ಲಿ ಮಾತ್ರವಲ್ಲದೇ ಬಗೆ ಬಗೆಯ ಕೇಶವಿನ್ಯಾಸ, ಡ್ರೆಸ್‍ಕೋಡ್, ಇತ್ಯಾದಿಗಳಲ್ಲಿ ಸದಾ ಸುದ್ದಿ ಮಾಡುತ್ತಲೇ ಬಂದವರು. ಅದರಂತೆ ಮೊನ್ನೆ ಮೊನ್ನೆಯೂ ಹೊಸತೊಂದು ನಡೆ-ನುಡಿಯಿಂದ ಸುದ್ದಿಯಾದರು ಎನ್ನುವ ವಿಶೇಷವೇ ಈ ಅಂಕಣ ಬರೆಯಲು ಕಾರಣ.
‘ದೇವ್ರು ಎಲ್ಲರÀನ್ನು ಹರಸ್ತಾನೆ, ನಾನು ಮುಸ್ಲಿಂ ಅಲ್ಲ. ಮುಂಜಾನೆ ಕೇಳುವ ಅಜಾನ್ (ದಿನಕ್ಕೆ 5 ಬಾರಿ ಪ್ರಾರ್ಥನೆ ಮಾಡುವುದಕ್ಕಾಗಿ ಇಸ್ಲಾಂ ಧರ್ಮೀಯರನ್ನು ಎಚ್ಚರಿಸುವ ಮಸೀದಿಯ ಕರೆ) ಯಿಂದಾಗಿ ಪ್ರತಿನಿತ್ಯ ಬೇಗ ಎಚ್ಚರಗೊಳ್ಳುವಂತಾಗಿದೆ. ಭಾರತದಲ್ಲಿ ಇಂತಹ ಬಲವಂತವಾಗಿ ಧಾರ್ಮಿಕತÉ ಹೇರುವ ಪರಿಪಾಠ ಕೊನೆಗೊಳ್ಳುವುದು ಎಂದು’!!.

‘ಇಸ್ಲಾಂ ಧರ್ಮ ಸ್ಥಾಪನೆಯಾದಾಗ ವಿದ್ಯುತ್‍ಚ್ಚಕ್ತಿಯನ್ನು ಇನ್ನೂ ಕಂಡು ಹಿಡಿದಿರಲಿಲ್ಲ. ಎಡಿಸನ್ ಅವರ ಸಂಶೋಧನೆಯ ಬಳಿಕ ನಾನೇಕೆ ಈ ಧ್ವನಿ ಕೇಳಬೇಕು’...

‘ನಾಸ್ತಿಕರನ್ನು ಎಬ್ಬಿಸುವುದಕ್ಕಾಗಿ ವಿದ್ಯುತ್‍ಚ್ಚಕ್ತಿ ಬಳಸುವ ಯಾವುದೇ ದೇವಸ್ಥಾನ ಅಥವಾ ಗುರುಧ್ವಾರಗಳನ್ನು ನಾನು ನಂಬುವುದಿಲ್ಲ... ಯಾಕೆ ನಂಬಬೇಕು!?, ನಿಜವಲ್ಲವೇ.!?
ಹೀಗೆ ಸರಣಿ ಟ್ವೀಟ್‍ಗಳನ್ನು ಮಾಡುವ ಮೂಲಕ ದೇಶದ ಗಮನ ಸೆಳೆದ ದಿಟ್ಟತನ ಮೆರೆದ ಗಾಯಕನ ಈ ಸಮಾಚಾರವನ್ನು ಬರೆಯಬೇಕಿನಿಸಿತು ಅದಕ್ಕಾಗಿ ಬರೆಯುತಿರುವೆ ಅದರ ಜೊತೆ ಅವರ ಪೂರ್ಣ ಜೀವನದ ಸಣ್ಣ ಪರಿಚಯವೂ ಇದರಲ್ಲಿಡುವ ಪ್ರಯತ್ನ ಮಾಡಿರುವೆ. 

ಈ ಮೇಲಿನ ಟ್ವೀಟ್ ಹೊರಬಿದ್ದಾಗ ನನ್ನೊಳಗೇನು ಗೊಂದಲವಾಗಲಿಲ್ಲ, ಕೋಮುಗಲಭೆಗೆ ಸ್ಫೂರ್ತಿಯಾಗುತ್ತೆ ಎನ್ನುವ ಭಯವೂ ಕಾಣಲಿಲ್ಲ ಕಾರಣ ನಿಜವಾಗಿಯೂ ದಿನನಿತ್ಯ ಅಥವಾ ಹಬ್ಬ ಹರಿದಿನಗಳಲ್ಲಿ ಮನಬಂದಂತೆ ಬೊಬ್ಬಿರಿಯುವ ಎಲ್ಲಾ ಮತಬಾಂಧವರೂ ಇದರ ಬಗ್ಗೆ ಗಮನ ಹರಿಸಬೇಕು ಅನಿಸಿತು. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವಂತಹ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೊಂದು ಎಲ್ಲೆಯೂ ಇದೆ ಎಂಬುದನ್ನು ನೆನಪಿಸುವ ಆಶಯ  ಅವರ ಸಂದೇಶದಲ್ಲಿ ಎದ್ದು ಕಂಡಿದ್ದನ್ನು ನಾನಂತೂ ಗ್ರಹಿಸಿಕೊಂಡೆ. ಇದನ್ನು ಪ್ರತಿಯೊಬ್ಬನು ಮನವರಿಕೆ ಮಾಡಿಕೊಳ್ಳಬೇಕಾದ ಅವಶ್ಯಕತೆಯೂ ಇಂದು ನಮ್ಮ ಮುಂದಿದೆ. ನಟಿ ಕಂಗನಾ, ನಟ ಸೈಫ್ ಅಲಿ ಖಾನ್‍ರವರು ತಮ್ಮ ಪ್ರೀತಿ ಪಾತ್ರರು, ಪಂಗಡವರಿಗಾಗಿ ಸೋನು ಹೇಳಿದ್ದು ತಪ್ಪೆಂದು ವಿರೋಧ ವ್ಯಕ್ತಪಡಿಸಿದರೂ, ಟ್ವೀಟ್‍ನಲ್ಲಿ ಅವರು ಬಳಸಿದ ಭಾಷೆ ಹಾಗೂ ತರ್ಕಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅದೇ ಪ್ರಮಾಣದ ಶ್ಲಾಘನೆಯೂ ಸಿಕ್ಕಿರುವುದು ಮತ್ತೊಂದು ವಿಶೇµವಾಯಿತು.

ಮುಂದೆ, ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಬಗ್ನಾನ್ ಎಂಬಲ್ಲಿನ ಖಾನ್ಕಾ ಷರೀಫ್Àನ ಧಾರ್ಮಿಕ ಮುಖ್ಯಸ್ಥ ಸೈಯದ್ ಷಾ ಅತೇಫ್ ಅಲಿ ಅಲ್ ಖಾದ್ರಿ ಫತ್ವಾ ಹೊರಡಿಸಿ ಸೋನು ನಿಗಮ್ ಕೇಶ ಮುಂಡನ ಮಾಡಿದವರಿಗೆ  10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು. ಈ ಸವಾಲನ್ನು ಸ್ವೀಕರಿಸಿದ ಸೋನು ಅವರೇ ಕೂಡಲೇ ತಮ್ಮ ಕೇಶ ವಿನ್ಯಾಸಗಾರ ಹಕೀಮ್ ಅಲೀಮ್ ಅವರನ್ನು ಕರೆಸಿಕೊಂಡು ಕೇಶ ಮುಂಡನ ಮಾಡಿಸಿಕೊಂಡರು. ‘ನಾನೊಬ್ಬ ಹಿಂದೂ, ನನ್ನ ಕೇಶ ಮುಂಡನ ಮಾಡಿದ ವ್ಯಕ್ತಿ ಮುಸ್ಲಿಮ್. ಇಲ್ಲಿ ಶತ್ರುತ್ವ ಎಲ್ಲಿ ಬಂತು!? ಫತ್ವಾದ ಭಾಷೆಗೆ ‘ಪ್ರೀತಿ’ಯ ಭಾಷೆಯಲ್ಲಿ ಉತ್ತರ ನೀಡಿರುವೆ. ಮೌಲ್ವಿ 10 ಲಕ್ಷ ರೂಪಾಯಿ ಸಿದ್ಧ ಪಡಿಸಿಕೊಳ್ಳಲಿ’ ಎಂದರು. ಈ ನಡೆ ನುಡಿ ನೋಡಿ ಜನ ದಿಗ್ಭ್ರಮೆಗೊಂಡು ವಿಷಯ ಇಡೀ  ರಾಷ್ಟ್ರವ್ಯಾಪಿ ಸುದ್ದಿಗೊಂಡಿತು. ಆದರೆ ಸೈಯದ್ ಷಾ ಅತೇಫ್ ಅಲಿ ಅಲ್ ಖಾದ್ರಿ ಅವರು ಇಮಾಮ್ ಅಥವಾ ಮೌಲಾನಾ ಅಲ್ಲ. ಅವರಿಗೆ ಧಾರ್ಮಿಕವಾಗಿ ಯಾವುದೇ ಅಧಿಕಾರವಿಲ್ಲ ಎಂಬ ವಿಷಯ ಆ ಬಳಿಕ ಬಹಿರಂಗವಾಯಿತು. ಅದೇನೆ ಇರಲಿ, ಇದ್ದು ಬೀಗಲಿ ಆದರೆ ಗಾಯಕನೊಬ್ಬನ ವಿಷಯ ಸ್ಫಷ್ಟತೆ, ಮಾತಿನ ಮೇಲೆ ಅವರಿಗಿರುವ ಪ್ರಭುದ್ಧತೆ, ಬದ್ಧತೆ ಮತ್ತು ಅಭಿವ್ಯಕ್ತತತೆಯ ಆಳತೆ ಎದ್ದು ಕಾಣುವುದನ್ನು ಪ್ರತಿಯೊಬ್ಬರೂ ಅಭಿನಂದಿಸಲೇಬೇಕು. ಒಂದು ದಾರ್ಮಿಕತೆಯ ಬಂಡಾಯ ಸಾರಲು ಕೂಗಿ  ಎಲ್ಲ ನಿಶ್ಯಬ್ಧದದ ಪರಿಸರದಲ್ಲಿ ಚೀರಾಟದ ನಡುವೆ ಮೌನ ಒಡೆಯಬೇಕಿಲ್ಲ. ಹಿಂದೂ ಸಂಸ್ಕøತಿ ಹೇಳುವಂತೆ ಧ್ಯಾನವೇ ದೇವರನ್ನು ಒಲಿಸಿಕೊಳ್ಳುವ ಮಾರ್ಗ. ಧ್ಯಾನವೆಂದರೆ ಮೌನತ್ವದಿಂದ ನಿಶ್ಯಬ್ಧರಾಗಿ ಮನಸಿನಾಳದ ಆಲಾಪನೆಗೆ ಕೂತು ದೇವರನ್ನು ಭಜಿಸುವುದು ಆದರೆ ಈ ಅಜಾನ್‍ನಲ್ಲಿ ಯಾಕೇ ಮೈಕ್‍ನ ಕೂಗೇ ಹೆಚ್ಚು ಪ್ರಾಮುಖ್ಯವಹಿಸುತ್ತೋ ತಿಳಿದಿಲ್ಲ!.

ಹಾಡಿನಲ್ಲಿ ಕನ್ನಡದ ಜನತೆ ಸೋನು ನಿಗಮ್‍ರನ್ನು ಯಾವಾಗಲೋ ಮೆಚ್ಚಿಕೊಂಡಿತ್ತು. ‘ಮುಂಗಾರು ಮಳೆ’ ಚಿತ್ರದಲ್ಲಿ ಅವರ ಗಾಯನ ಕೇಳಿ ಮಿಂದೆದ್ದ ಕನ್ನಡಿಗರು ಇಂದಿಗೂ ಅವರ ಹಾಡುಗಳೆಂದರೆ ಕಿವಿ ನಿಮಿರಿಕೊಂಡು ಕೇಳಿ ಸಂತಸಪಡುತ್ತಾರೆ. ಗಾಂಧೀನಗರದುದ್ದಕ್ಕೂ ಸಿನಿಮಾ ಸೆಟ್ಟೇರುವಾಗಲೇ ಸೋನು ನಿಗಮ್‍ರಿಂದ ಒಂದು ಹಾಡು ಹಾಡಿಸಿ ಅಂತ ಅದೆಷ್ಟೋ ಪ್ರೋಡ್ಯೂಸರ್‍ಗಳು ಸಂಗೀತ ನಿರ್ದೇಶಕರಿಗೆ ಹೇಳಿಯೇ ತೀರುವ ಎಷ್ಟೋ ಉದಾಹರಣೆಗಳಿವೆ. ಸೋನು ನಿಗಮ್‍ರ ಹಾಡಿಗೆ ಸುರಿಯುವ ಅಷ್ಟೂ ದುಡ್ಡು ವಾಪಾಸ್ಸು ಬಂದೇ ಬರುತ್ತೆ ಎನ್ನುವ ನಂಬಿಕೆ ಈಗಲೂ ಹಾಗೆಯೇ ಇದೆ. ಜಯಂತ್ ಕಾಯ್ಕಿಣಿಯಂತ ಉತ್ತಮ ಸಾಹಿತಿಯ ಬರವಣಿಗೆಗಳಿಗೆ ಧ್ವನಿಗೂಡಿಸಿದರಂತೂ ಸತ್ವವಿಲ್ಲದ ಸಿನಿಮಾವಾದರೂ ಅದನ್ನು ಹಾಡಿನಲೆಯಲ್ಲೇ ಗೆಲ್ಲಿಸುವ ತಾಕತ್ತು ಅವರ ಕಂಠಕ್ಕಿದೆ. ಅದಕ್ಕಾಗಿಯೇ ಕರ್ನಾಟಕದ ಜನತೆ ಅವರಿಗೆ ‘ಗೋಲ್ಡನ್ ಸ್ಟಾರ್ ಸಂಗೀತಗಾರ’ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಜುಲೈ 30 1973ರಲ್ಲಿ ಹರಿಯಾಣದ ಫರಿದಾಬಾದ್‍ನಲ್ಲಿ ಜನಿಸಿದ ಇವರು ತಂದೆ ಆಗಂ ಕುಮಾರ್ ನಿಗಮ್‍ರಿಂದಲೇ ಸಂಗೀತಾಭ್ಯಾಸವನ್ನು ಬಳುವಳಿಯಾಗಿ ಪಡೆದವರು. ಸಣ್ಣ ಪುಟ್ಟ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಸೋನುಗೆ 1990ರಲ್ಲಿ ‘ಜಾನಮ್’ ಎಂಬ ಸಿನಿಮಾದಲ್ಲಿ ಮೊದಲಬಾರಿಗೆ ಹಾಡುವ ಅವಕಾಶ ಸಿಕ್ಕರೂ ದುರಾದೃಷ್ಟವಶಾತ್ ಆ ಸಿನಿಮಾ ಅಧಿಕೃತವಾಗಿ ತೆರೆಕಾಣಲಿಲ್ಲ. ಆನಂತರ 1992ರಲ್ಲಿ ತೆರೆಕಂಡ ‘ಆಜಾ ಮೇರಿ ಜಾನ್’ ಸಿನಿಮಾದಲ್ಲಿ ‘ಓ ಆಸ್ಮಾನ್ ವಾಲೇ’  ಹಾಡು ಸೋನು ಅವರ ಮೊದಲ ಹಾಡೆನಿಸಿತು. ಅಲ್ಲಿಂದ ಪ್ರಾರಂಭವಾದ ಜರ್ನಿ 1997ರಲ್ಲಿ ಅನು ಮಲಿಕ್ ಸಂಗೀತ ನಿರ್ದೇಶನದಲ್ಲಿ ‘ಬಾರ್ಡ್‍ರ್’ ಸಿನಿಮಾದ ‘ಸಂದೇಸೆ ಆತೇ ಹೈ’ ಹಾಡನ್ನು ಹಾಗೂ ‘ಪರ್ದೇಸೆ’ ಚಿತ್ರದ  ‘ಯೇ ದಿಲ್ ಹೈ ದೀವಾನ’ ಹಾಡನ್ನು ಹಾಡಿ ಜನಮೆಚ್ಚುಗೆ ಪಡೆದರು. ಮೊದಮ್ಮದ್ ರಫೀ ಅವರ ಹಾಡುಗಳ ಸಂಗ್ರಹ ‘ ರಫೀ ಕೀ ಯಾದೇ’ ಸೇರಿ ಒಟ್ಟು 100 ಹಾಡುಗಳ ಆರು ಡಿಸ್ಕ್‍ಗಳನ್ನು ‘ಕಲ್ ಆಜ್ ಜೌರ್ ಕಲ್’ ಶೀರ್ಷಿಕೆಯಲ್ಲಿ ಸಪ್ಟೆಂಬರ್ 2007ರಲ್ಲಿ ಬಿಡುಗಡೆ ಮಾಡಿದ್ದು ಅವರ ವೃತ್ತಿ ಬದುಕಿನ ಮಹಾನ್ ಸಾಧನೆಗಳಲ್ಲೊಂದು.

    ಇನ್ನೂ ಹಾಡುಗಾರಿಕೆಯಲ್ಲಿ ಕನ್ನಡಕ್ಕೆ ಅವರ ಕೊಡುಗೆಗಳನ್ನು ಗಮನಿಸಿದರೆ 1996ರಲ್ಲಿ ವಿಷ್ಣುವರ್ಧನ್ ಅವರ ‘ಜೀವನದಿ’ ಸಿನಿಮಾದಲ್ಲಿ ‘ಎಲ್ಲೋ ಯಾರೋ ಹೇಗೋ’ ಹಾಡಿನ ಮೂಲಕ ಸ್ಯಾಂಡಲ್ ವುಡ್ ಜರ್ನಿ ಪ್ರಾರಂಭಿಸಿ ಇದುವರೆಗೂ 600ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು ಒಂದಕ್ಕಿಂತ ಒಂದು ಅಂದವಾಗಿ, ಭಿನ್ನವಾಗಿವೆ. ಬಾಲಿವುಡ್ ಬಿಟ್ಟರೆ ವೃತ್ತಿ ಬದುಕಲ್ಲಿ ಹೆಚ್ಚು ಹಾಡಿದ್ದು ಕನ್ನಡದ ಹಾಡುಗಳೇ ಎನ್ನುವುದು ನಮ್ಮ ಹೆಮ್ಮೆ ಹಾಗೂ ಅವರ ವಿಶೇಷತೆ. ಇಂದಿಗೂ ‘ಸ್ನೇಹಲೋಕ’ ಚಿತ್ರದ ‘ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ’, ‘ಗಟ್ಟಿಮೇಳ’ ಚಿತ್ರದ ‘ಹಂಸವೇ ಹಂಸವೇ’, ‘ಮುಂಗಾರು ಮಳೆಯ’ ‘ಅನಿಸುತಿದೆ ಯಾಕೋ ಇಂದು’, ‘ಮಿಲನ’ ಚಿತ್ರದ ‘ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ’... ಸೇರಿದಂತೆ ಸಿನಿಪ್ರಿಯರು ಆಯಸ್ಸು ಇರುವವರೆಗೂ ಗುನುಗುನಿಸುವಷ್ಟು ಅಂದದ ಹಾಡುಗಳನ್ನು ಕೊಟ್ಟಿರುವುದು ಸೋನು ನಿಗಮ್‍ರಿಂದ ನಮಗೆ ಸಿಕ್ಕಿರುವ ಕೊಡುಗೆ.

ಹಿಂದಿಯಲ್ಲಿ ಅನೇಕ ಆಲ್ಭಮ್ ಹಾಡುಗಳ ಮೂಲಕ ಮನೆಮಾತಾಗಿರುವ ಸೋನು ನಿಗಮ್ ವರ್ಷಕ್ಕೊಮ್ಮೆಯಾದರೂ ಒಂದೊಂದು ಹೊಸ ಹೊಸ ಪ್ರಯೋಗಗಳನ್ನು ಜನರ ಮಧ್ಯೆಯೇ ಇದ್ದು ಸಮಾಜಕ್ಕೆ ಒಳ್ಳೆಯದನ್ನು ಸಾರುತ್ತಲೇ ಇರುತ್ತಾರೆ. ಹಿಂದೆ ಭ್ರಷ್ಟಾಚಾರದ ವಿರುದ್ಧವಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆದಾಗಲೂ ಸೋನು ಸತ್ಯಾಗ್ರಹದಲ್ಲಿ ಭಾಗವಹಿಸಿ ದೇಶದ ಕಳಕಳಿಗೆ ಭಾಜನರಾಗಿದ್ದರು. ಅಲ್ಲದೇ ಕಳೆದ ಬೇಸಿಗೆಯ ಒಂದು ಘಟನೆಯನ್ನು ನಿಮಗೆ ನಾನು ಹೇಳಲೆಬೇಕು. ಸೋನು ನಿಗಮ್  ತಮ್ಮ ಯೂ ಟ್ಯೂಬ್‍ಗೆ ‘ದ ರೋಡ್ ಸೈಡ್ ಉಸ್ತಾದ್’ ಎಂಬ ಹಣೆಪಟ್ಟಿಯ ಆರು ನಿಮಿಷದ ವಿಡಿಯೋ ಅಪ್ಲೋಡ್ ಮಾಡಿದ್ದರು. ಅದರಲ್ಲಿ ಅವರು ಮುಂಬೈನ ವಿವಿಧ ರಸ್ತೆ ಬದಿಯಲ್ಲಿ ಮಾಸಿದ ಬಟ್ಟೆ ತೊಟ್ಟು ವೃದ್ಧನ ವೇಷದಲ್ಲಿ ಸರಿಸುಮಾರು 25 ಹಾಡುಗಳನ್ನು ಹಾಡಿದ ದೃಶ್ಯವಿತ್ತು. ಈ ಕುರಿತು ಅವರು ಪ್ರತಿಕ್ರಿಯಿಸಿದ ಬಗೆ ನಿಜಕ್ಕೂ ‘ನಾನ್ಯಾರು’ ಎಂಬ ಪ್ರಶ್ನೆಗೆÉ ಸ್ವತಃ ಅವರೇ ಉತ್ತರ ಕಂಡುಕೊಂಡ ಹಾಗಿತ್ತು.

‘ನನ್ನ ಉಡುಗೆ ತೊಡುಗೆಯಷ್ಟೇ ಬದಲಾಗಿತ್ತು. ಹಾಡುಗಾರಿಕೆಯ ಶೈಲಿ, ಧ್ವನಿ ಯಾವುದರಲ್ಲೂ ಬದಲಾವಣೆ ಇರಲಿಲ್ಲ. ಅದಾಗ್ಯೂ ಜನ ನನ್ನನ್ನು ಗುರುತಿಸಲಿಲ್ಲ ನನಗದು ದೊಡ್ಡ ಅನುಭವ’ ಎಂದು ಹೇಳಿಕೊಂಡಿದ್ದರು.

ಹೀಗೆ ಒಂದಿಲ್ಲೊಂದು ಬಗೆಯಲ್ಲಿ ಜಾಣ್ಮೆಯಲ್ಲೇ ಉತ್ತರ ನೀಡುವ, ಪ್ರ್ಯಾಕ್ಟಿಕಲ್ ಅನುಭವ ನೀಡುವ, ಒಳ್ಳೆಯ ನಡಿಗೆಯಲ್ಲಿ ಸದಾ ಸುದ್ದಿ ಮಾಡುವ ಸೋನುನಿಗಮ್ ಈ ಬಾರಿ ಅಜಾನ್‍ನ ಬಗ್ಗೆ ಟ್ವೀಟ್ ಮಾಡಿ, ಸೈಯದ್ ಷಾ ಹೇಳಿದ ಮಾತಿನಂತೆ ನಡೆದುಕೊಂಡು, ಮುಜುಗರವಾಗುವಂತೆ ಮಾಡಿ ಸೈ ಎನಿಸಿಕೊಂಡಿರುವ ಅವರ ಅಭಿವ್ಯಕ್ತತೆಯಲ್ಲೂ ಸತ್ವವಿದೆ ಎನ್ನುವುದನ್ನು ಎಲ್ಲಾ ಜನಾಂಗದವರು ಯೋಚಿಸಬೇಕು. ಇನ್ನೊಬ್ಬರಿಗೆ ತೊಂದರೆ ನೀಡುವ ದೇವರನ್ನು ಕೂಗುವ ಶಬ್ದಮಾಲಿನ್ಯಕ್ಕೆ ಕಡಿವಾಣ ಹಾಕಬೇಕು... ಈ ಬಗ್ಗೆ ಚಿಂತನೆ ನಡೆಯಬೇಕು...
ಏನಂತೀರಾ!?...