ಈ ಸ್ಟೋರಿ ಪ್ರಾರಂಭವಾಗುವುದಕ್ಕೆ ಮುಂಚೆ ಅವಳೊಬ್ಬಳು ಪಾಪದ ಹುಡುಗಿ. ಸುಂದರ ಕನಸುಗಳನ್ನು ಹೊತ್ತ ಸುಂದರಿ. ಅವಳಿಗಿತ್ತು ಅವಳದೇ ಕೆಲವೊಂದು ರೀತಿ-ನೀತಿ, ನಲಿವಿನ ಪರಿಚಯ ಮಾತ್ರವೇ ಇತ್ತು. ಆ ಬಾಲೆಗೆ ಮುಂದೊಂದು ದಿನ ಬದುಕೆಂಬ ದೋಣಿ ಬಿರುಗಾಳಿಗೆ ಸಿಲುಕಿ ಮುಳುಗಿ ಹೋಗುತ್ತದೆಯೇನೊ ಎಂಬ ಪರಿವೆಯೇ ಇರಲಿಲ್ಲ. ಟೋಟಲ್ ಆಗಿ ಅವಳೊಬ್ಬಳು ಮುಗ್ಧೆ ಎಂದರೆ ತಪ್ಪಿಲ್ಲ.
ತಂದೆ ತಾಯಿಯರಿಗೆ ಕಷ್ಟವಿದ್ದರೂ ಮಗಳಿಗೆ ಅದರ ಗುರುತು ನೀಡಿರಲಿಲ್ಲ. ಬೇಕೆಂದಿದ್ದನೆಲ್ಲಾ ಕೊಡಿಸಿ ಶ್ರೀಮಂತಿಕೆಯ ರಕ್ಷಾ ಕವಚ ಪರಿಚಯಿಸಿದ್ದರು. ಆಗಲೇ ಲೈಫ್ ಈಸ್ ಬ್ಯೂಟಿಫುಲ್ ಎನ್ನುತ್ತಾ ಮೆಲ್ಲನೆ ಎಸ್.ಎಸ್.ಎಲ್.ಸಿ ಮುಗಿಸುತ್ತಾ ಪಿ.ಯು.ಸಿ ಗೆ ಕಾಲಿರಿಸಿದ್ದಳು ಆಕೆ. ಈಗವಳು ಹರೆಯಕ್ಕೆ ಕಾಲಿಟ್ಟ ಚೆಲುವೆ. ಅದೊಂದು ರೀತಿಯ ಹೊಸ ಬಗೆ, ನವನವೀನ ಹುರುಪು, ಚಲ್ಲಾಟಕ್ಕೆ ಬ್ರೇಕ್ ಕೊಟ್ಟು ಸ್ವಲ್ಪ ಗಂಭೀರಕ್ಕೆ ತಿರುಗುವ ಜೋಷ್, ಬೇಡವೆಂದರೂ ಕನ್ನಡಿಯ ಮುಂದೆ ನಿಲ್ಲಿಸಿ ಮೇಕಪ್ ಮಾಡುವ ವಯಸ್ಸು. ಅದಾಗಲೇ ಹಳೆಯ ಗೆಳತಿಯರ ಜೊತೆಗೆ ಒಂದಿಷ್ಟು ಹೊಸ ಗೆಳತಿಯರು ದೊರಕಿರುವ ಖುಷಿ. ಹೀಗೆ ಎಲ್ಲವೂ ಭಿನ್ನ ಭಿನ್ನವಾಗಿದ್ದವು. ಪುಟ್ಟ ಹಳ್ಳಿಯಲ್ಲಿ ಬೆಳೆದು ಓದಿರುವ ಅವಳು ಆ ಹೊತ್ತಿಗಾಗಲೇ ಬಸ್ಸ್ನಲ್ಲಿ ಪಟ್ಟಣದ ಕಾಲೇಜಿಗೆ ಹೋಗಿ ಬರುತ್ತಿದ್ದಳು. ನಮ್ಮ ಹಾಗೆ ನಮ್ಮ ಮಗಳು ಆಗಬಾರದು, ಆಧುನಿಕತೆ ಅವಳಿಗೂ ಒಗ್ಗಲಿ ಎಂದೆನಿಸಿಕೊಂಡು ಮೂಲಭೂತ ಸೌಕರ್ಯ ಎಂಬಂತೆ ಒಂದೊಳ್ಳೆ ಮೊಬೈಲ್ನ್ನು ತೆಗೆಸಿಕೊಟ್ಟರು ತಂದೆ ತಾಯಿ.
‘ಮನೆಗೆ ಬರುವುದು ಲೇಟಾದರೆ, ಬಸ್ಸ್ ಮಿಸ್ ಆದರೆ, ಕಾಲ್ ಮಾಡಿ ತಿಳಿಸು ಮಗಳೆ’ ಎಂದು ಮುದ್ದಿಸಿ ಇನ್ನು ಸ್ವಲ್ಪ ಜಾಸ್ತಿ ಶ್ರೀಮಂತಿಕೆ ನೀಡಿ ಸಂಧರ್ಭಗಳ ಸವಿಯನ್ನು ಸವಿದಿದ್ದರು.
ಪ್ರಾರಂಭದಲ್ಲಿ ಎಲ್ಲ್ಲವೂ ನೀಟಾಗಿಯೇ ಇತ್ತು. ಸಂಬಂಧಿಕರು ಗೆಳತಿಯರು ಎಂದು ಕಾಂಟಾಕ್ಟ್ ಸೇವ್ ಆಗುತ್ತಿದ್ದ ಮೊಬೈಲ್ಗೆ ಮಸೇಜ್, ಕಾಲ್ಗಳು ಮಾಮುಲಿಯಾಗಿ ಬಂದು ಹೋಗುತ್ತಿದ್ದವು. ಇದೆಲ್ಲದರ ಮಧ್ಯೆ ಒಂದು ದಿನ ಅಚಾನಕವಾಗಿ ಬಂದ ಮಿಸ್ಕಾಲ್ ಅವಳ ಮೊಬೈಲ್ ಪರದೆಗೆ ಅಪ್ಪಳಿಸಿತ್ತು. ಅಂದಿನ ಆ ಮಿಸ್ಸ್ ಕಾಲ್ಗೆ ಶುರುವಾದ ಕ್ಯೂರ್ಯಾಸಿಟಿ ಯಾವಾಗ ಆಕೆ ಪದೆ ಪದೇ ಮೊಬೈಲ್ ನೋಡುವಂತೆ ಮಾಡಿತ್ತೋ, ಅಲ್ಲಿಂದಲೇ ಬದಲಾವಣೆಯ ಗಾಳಿ ಬೀಸಿತ್ತು ನೋಡಿ. ಅದೊಂದು ಕಳ್ಳಾಟಿಕೆ ತನ್ನ ಲೈಫ್ನ್ನೇ ಮುಂದೊಂದು ದಿನ ಮಿಸ್ ಮಾಡುತ್ತೆ ಎಂದು, ತಿಳಿದಿರಲಿಲ್ಲ ಆಕೆಗೆ. ಆನಾಮಿಕನಂತೆ ಮಿಸ್ ಕಾಲ್ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಇವಳಿಗೆ ದಿನ ಕಳೆದಂತೆ ಅವನ ವನಪು, ವಯ್ಯಾರವನ್ನು ಮೆಸೇಜ್ ಎಂಬ ಮಾಯೆಯಲ್ಲಿ ಕಳುಹಿಸುತ್ತಾ, ತನ್ನೆಡಗೆ ಸೆಳೆದು, ಬಗೆಬಗೆಯ ಆಸೆ ಹುಟ್ಟಿಸುತ್ತಾ ಮೊದಲು ಮೀಟಿಂಗ್ ಮಾಡೋಣ ಎಂದು ಕಾಲ್ ಮಾಡುವ ಸಾಹಸಕ್ಕೆ ಕೈ ಹಾಕಿ, ನಂತರ ಡೇಟಿಂಗ್ವರೆಗೂ ಕರೆದು ಮುಂದೇನು ಎಂಬುವಷ್ಟರಲ್ಲಿ ಜೇನು ರಸವನ್ನು ಹೀರಿ ಗೂಡು ಬಿಟ್ಟು ಪರಾರಿ ಎಂಬಂತೆ ಮಾಯವಾಗಿದ್ದ. ಜೊತೆಗೆ ತನ್ನ ಲೀಲೆಯ ಮಹಿಮೆಯನ್ನು ಸೋಷಿಯಲ್ ಆಗೂ ತಿಳಿಯುವಂತೆ ಮಾಡಿ ಪರಾರಿಯಾಗಿದ್ದ. ಮನೆಗೆ ದೀಪವಾಗಿದ್ದ ಅವಳ ಬೆಳಕು ಆ ಕ್ಷಣದಿಂದಲೇ ಬಿರುಗಾಲಿಗೆ ಸಿಲುಕಿ ನಂದಿ ಹೋಗುವ ಹಣಾಹಣಿಯಲ್ಲಿ ಸಾಗಿತ್ತು. ವಿಷಯ ತಿಳಿದ ಅಪ್ಪ ಅಮ್ಮನ ಪ್ರೀತಿ ಅಷ್ಟಕಷ್ಟೆ ಆಗಿತ್ತು. ಕಾಲೇಜುಗಳಲ್ಲಿಯೂ ಎಲ್ಲರದೂ ಇವಳ ಜೊತೆ ನೀರವ ಮೌನ. ಸೆಳೆದು ಅಬ್ಬರಿಸುತ್ತಿದ್ದ ಅವಳ ಅಂದಕ್ಕೆ ನೋಡುವವರೆ ಗತಿ ಇರಲಿಲ್ಲ. ಅವಳಿಗೆ ಇದೀಗ ಎಲ್ಲವೂ ಸಾಕಾಗಿದೆ. ಅಂದು ಅವನ ಒಂದು ಮೆಸ್ಸೇಜ್ಗೆ ತಡಬಡಿಸಿ ಕಾಯುತ್ತಿದ್ದವಳು ಇಂದು ಅವನನ್ನು ನೆನೆಸಿದರೆ ಮೈಪರಚಿದಂತೆ ಪರಿತಪ್ಪಿಸುತ್ತಿದ್ದಳು. ಜೀವನವೇ ಬೇಡ ಎನಿಸಿ ಕೊನೆಗೂ ತೀರ್ಮಾನಿಸಿಯೇ ಬಿಟ್ಟಿದ್ದಳು. ಕಣ್ಣು ಮುಚ್ಚಿ ತೆರೆಯುವುದರೊಳಗೆ ಪರಲೋಕ ಸೇರಿದ್ದಳು.
ಈ ನೋವಿನ ಘಟನೆ ನಾ ಕಂಡ ನಿಜವೇ ಆದರೂ ಇದು ಒಂದು ಹುಡುಗಿಯ ಜೀವನದ ಗಾಥೆಯಲ್ಲ. ಅದೆಷ್ಟೋ ಹೆಣ್ಣು ಮಕ್ಕಳು ಅನುಭವಿಸಿರುವ ಘಟನೆ. ನಾನು ಹೇಳುವುದು ಇಷ್ಟೇ, ಹರೆಯದ ಹುಡುಗಿಯರೇ ಯಾವುದೂ ಎಷ್ಟೂ ಬೇಕೋ ಅಷ್ಟೇ ಇರಲಿ ಅತಿಯಾದರೆ ಅಮೃತವು ವಿಷ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಒಂದಿಷ್ಟು ಜನ ಬಣ್ಣ ಹಚ್ಚುವುದರಲ್ಲೆ ಬೇರೆಯವರ ಜೀವನದ ಓಕುಳಿಯನ್ನು ಆಡುತ್ತಿರುತ್ತಾರೆ, ಆಡಿರುತ್ತಾರೆ. ಕೆಲವೊಂದು ವರ್ಗ ಅದಕ್ಕಾಗಿ ನೆಲೆನಿಂತುಕೊಂಡು ಅಂದದ ಹುಡುಗಿಯರು, ಅಮಾಯಕ ಮಹಿಳೆಯರ ಜೊತೆ ಆಟವಾಡಿ ಮಜಾ ತೆಗೆದುಕೊಂಡು ಸಂಸ್ಕøತಿಯ ರೂಪು ರೇಷೆಯನ್ನು ಹಾಳುಗೆಡವುತ್ತಿದೆ. ಹೆಣ್ಣನ್ನು ಭೋಗಕ್ಕೆಂದೆ ಉಪಯೋಗಿಸುವ ಸಾಮಾಜಕ್ಕೆ ಸೋಷಿಯಲ್ ಮೀಡಿಯಾಗಳು ಪುಷ್ಟಿಕೊಟ್ಟು ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಮೊಬೈಲ್ ಫೋನ್ ಗಳನ್ನು ಬಳಸಿ ಆದರೆ ಬಳಕೆಯಲ್ಲಿ ಮಿತಿಯಿದ್ದು, ಎಲ್ಲವೂ ನಿಜವೆಂದು ನಂಬದೆ, ಗುರುತು ಪರಿಚಯವಿಲ್ಲದವರ ಬಳಿ ಕಾಂಟ್ಯಾಕ್ಟ್ ಬಳಸುವ ವೇಳೆ ಜಾಗೃತೆ ವಹಿಸಿ, ಹೆತ್ತವರೇ,,, ಮಕ್ಕಳ ನಡೆ ನುಡಿಯಲಿ ನೀವೂ ಎಚ್ಚರವಹಿಸಿ ಯಾಕೆಂದರೆ ನಿಮ್ಮ ಮಕ್ಕಳಿಗೆ ಏನೇ ಆದರೂ ಹೊಣೆಗಾರರು ನೀವೆ ಎಚ್ಚರವಿರಲಿ ...
No comments:
Post a Comment