Saturday 30 January 2016

ಚಿತ್ರರಂಗದ ಸಮಸ್ಯೆಯ ಸುತ್ತ-ಸಿರಿ ಬುಲೆಟ್

ಕನ್ನಡ ಚಿತ್ರರಂಗಕ್ಕೆ ಸೆಡ್ಡು
ಹೊಡೆತ ತಿಂದರೆ ಹೊಂದುವವರ್ಯಾರು ಭಾಷೆಗೆ
ಪರಭಾಷೆಯ ಚಿತ್ರಗಳಿಗೆ ರತ್ನಗಂಬಳಿ, ಬಂದಿದೆ ಕನ್ನಡ ಚಿತ್ರರಂಗಕ್ಕೀಗ ಅಳಿ ಅಥವಾ ಉಳಿ...
ಗಾಂಧಿನಗರದಲ್ಲೇ ಕನ್ನಡ ಚಿತ್ರಕ್ಕಿಲ್ಲ ಥಿಯೇಟರ್...

   

ವರ್ಷಂಪ್ರತಿಯೂ ರಾಜ್ಯೋತ್ಸವ ಆಚರಣೆ ಮಾಡಿ, ತನು ಕನ್ನq, ಮನ ಕನ್ನಡ ಎನ್ನುವ ಘೋಷ ವಾಕ್ಯದೊಂದಿಗೆ ಪ್ರತಿಬಾರಿಯೂ ಜೈ ಎನ್ನುವಂತೆ ಈ ಬಾರಿಯೂ ಕೈ ಎತ್ತಿ, ಕೂಗಿ ಕರತಾಳನವನ್ನು ಮಾಡಿ, ತಾಯಿ ಕನ್ನಡಾಂಬೆಯ ಮಕ್ಕಳು ನಾವು, ಕನ್ನಡಕ್ಕಾಗೇ ನಮ್ಮುಸಿರು ಎಂದೆಲ್ಲಾ ಬೊಬ್ಬಿರಿದು, ವಿಜೃಂಭಣೆಯಲ್ಲಿ ಸಭೆ ಸಭಾರಂಭವನ್ನು ಮುಗಿಸಿ, ತಮ್ಮ ತಮ್ಮ ಮನೆಗೆ ತೆರಳಿ ಸುಮ್ಮನೆ ಕುಳಿತಿದ್ದೇವೆ. ಇನ್ನೂ ಕೆಲವರು ಹಿಂದಿನ ವರ್ಷಗಳ ಆಯೋಜನೆಗಿಂತ ಒಂದು ಪಟ್ಟು ಜಾಸ್ತಿ ಅದ್ಧೂರಿಯನ್ನೇ ಕೈಗೊಂಡು, ಸಿನಿಮಾ ತಾರೆಯರ, ಧುರೀಣರ, ಗಣ್ಯರ ಆಗಮನಭಿಲಾಷೆಯಿಂದಲೇ ಹಾಡಿ, ಕುಣಿದು, ಕುಪ್ಪಳಿಸಿ ಭಾಷಾಭಿಮಾನ ಮೆರೆದಿದ್ದಾರೆ. ಮತ್ತೂ ಹಲವರು ಇನ್ನೂ ಕೂಡ ರಾಜ್ಯೋತ್ಸವದ ಹಬ್ಬ ನಡೆಸುತ್ತಲೇ ಇದ್ದಾರೆ, ಅಂಗಡಿ ಮುಂಗಟ್ಟುಗಳಿಂದ ಸಹಾಯಧನದ ನೆಪದಲ್ಲಿ ಹಣ ಕೀಳುತ್ತಲೇ ಇದ್ದಾರೆ, ಫಂಕ್ಷನ್ ಆಯೋಜನೆಯಲ್ಲಿ ದಿನದೂಡುತ್ತಿದ್ದಾರೆ... ಇರಲಿ ಅದೇನೆ ಇರಲಿ, ವರ್ಷವಿಡೀ ರಾಜ್ಯೋತ್ಸವ ಮಾಡಬೇಕೆಂಬ ಮಾತು ಕೇಳಿ ಕೇಳಿ ನಮಗೂ  ಹೀಗೆಲ್ಲಾ ನಡೆದರೆ ಇಡೀ ವರ್ಷ, ಕನ್ನಡಾಂಬೆಯ ಪೂಜೆಯನ್ನು ನೋಡಿ ಕಣ್ಮನ ಸೆಳೆದುಕೊಳ್ಳಬಹುದೆಂಬ ಆತ್ಮತೃಪ್ತಿಯೂ ಇದೆ.
 ಈ ಅನಿಯಮಿತ ಅದ್ಧೂರಿ ಸಮಾರಂಭಗಳು ಕೇವಲ ಇಲ್ಲಿನವರ ಕನ್ನಡ ಹೃದಯಾಭಿಮಾನಕ್ಕೆ ಮಾತ್ರಾ ಸೀಮಿತವಾ? ಅಥವಾ ಇಲ್ಲಿ ಬಂದು ನೆಲೆಸುವ ಪ್ರತಿ ಬಂಧು ಬಾಂಧವರಿಗೂ ಸಮರ್ಪಣೆಯಾ? ಎನ್ನುವುದರ ಬಗ್ಗೆ ಬಹುಶಃ ಯಾರೂ ಚಿಂತಿಸುವ ಮನಸ್ಸು ಮಾಡಿಲ್ಲ ಅನಿಸುತ್ತಿದೆ. ಕನ್ನಡ ಶಾಲೆಗಳು, ಕನ್ನಡ ಮಾತನಾಡುವ ದಿನಚರಿಗಳು, ಕನ್ನಡ ಕಲಿಸುವ ಡಿಂ ಡಿಮಾಗಳು ಅಲ್ಲಲ್ಲಿ ತನ್ನ ಕಳೆಬರಗಳನ್ನು ಕಳಚಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾದರೂ, ಹೋರಾಟದ ಹೆಸರಿನ ಜೊತೆ ಅಲ್ಲಲ್ಲಿ ಅವುಗಳ ಬಗ್ಗೆ ಮಾತುಕಥೆ, ಚರ್ಚೆ ಇತ್ಯಾದಿಗಳ ಚರ್ಯೆಯು ಕಂಡುಬರುತ್ತಿದೆ. ಸುಮಾರು ಅಷ್ಟು ವರ್ಷಗಳ!!!.., ಸುಮಾರು ಇಷ್ಟು ಶತಮಾನಗಳ!!!..,ಅದು-ಇದು ಇದೆ... ಎಂದು ಕೊಚ್ಚಿಕೊಳ್ಳುವ ನಾವುಗಳೇ ಇಂದು ಕನ್ನಡದ ಉಳಿವನ್ನು ಅಥವಾ ಅದರ ಉಳಿವಿನ ಚಿಂತೆಯನ್ನು ಎಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆಂದು ಮಥಿಸಿದರೆ ಉತ್ತರ ಎಷ್ಟು!!?? ಎನ್ನುವ ಖ್ವಷನ್ ಮಾರ್ಕ್‍ಗೆ ತಿರುಗುತ್ತದೆ. ಇದು ಆಶ್ಚರ್ಯವಾದರೂ ಸತ್ಯ...
 ಎಲ್ಲಾ ಕಡೆಯಿಂದಲೂ ಕನ್ನಡ ನಾಡು ನುಡಿಗೆ ದಬ್ಬಾಳಿಕೆಯ ಬಿಸಿ ಮುಟ್ಟುತ್ತಿದೆ ಬಹುತೇಕ ಎನ್ನುವ ಎಲ್ಲವೂ ಬೇರೆ ಭಾಷೆಗಳ ಲೀನತೆಗೆ ಹೊಂದಿಕೊಳ್ಳುತ್ತಿದೆ, ವಿದ್ಯೆ, ವ್ಯವಹಾರ, ಕಸುಬು, ಕೈಗಾರಿಕೆ ಇತ್ಯಾದಿಗಳಲ್ಲೂ ಅನ್ಯಭಾಷೆಯೇ ಮೇಲುಗೈ ಸಾಧಿಸಿ ನಮ್ಮೂರಲ್ಲೇ, ನಮ್ಮನ್ನವನ್ನೇ ತಿಂದು, ನಮ್ಮ ನೀರನ್ನೇ ಕುಡಿದು ಕ್ಯಾಕರಿಸಿ ನಮ್ಮ ಮುಖಕ್ಕೆ ಉಗಿಯುತ್ತಿದೆ. ಹೀಗೆ ಹೋದರೆ ಮುಂದಿನ ಗತಿ...!?
 ಇಂತಹ ಒಂದು ಸಂಚಕಾರ ಇತ್ತೀಚಿಗೆ ಮನೋರಂಜನೆಯ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ತಯಾರಾಗುವ ಪ್ರತಿ ಪ್ರೋಗ್ರಾಮ್‍ನಿಂದ ಹಿಡಿದು, ಅದನ್ನು ನಡೆಸುವ ಇನ್ ಚಾರ್ಜರ್ ಕೂಡ ಅನ್ಯರಾಜ್ಯದವನೇ ಆಗಿದ್ದು ನಮ್ಮನ್ನು ಬುಗುರಿಯಾಡಿಸುತ್ತಿದ್ದಾನೆ. ಈ ಸರದಿ ಇದೀಗ ಜನಸಾಮಾನ್ಯರ ಅತ್ಯಮೂಲ್ಯ ಮನೋರಂಜನೆಯ ಭಾಗವಾಗಿರುವ ಸಿನಿಮಾರಂಗಕ್ಕೂ ಕಾಲಿಟ್ಟಿದ್ದು, ಇದರ ಬಗ್ಗೆ ಮಂಡಳಿಯವರು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಮುಂದೊಂದು ದಿನ ನಮ್ಮ ಇಂಡಸ್ಟ್ರೀಯೂ ಮೂಲೆಗುಂಪಾಗಿ, ಪರಭಾಷೆಯ ಚಿತ್ರಗಳ ಎದುರು ತಲೆ ಎತ್ತಿ ನಿಲ್ಲುವುದು ಕಷ್ಟಸಾಧ್ಯ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ನಮ್ಮ ಕನ್ನಡ ಚಿತ್ರರಂಗಕ್ಕೆ ನೇರ ಅಥವಾ ದೂರ ಸಂಪರ್ಕ ಹೊಂದಿರುವ ಯಾರಾದರೂ ಒಬ್ಬರನ್ನು, ಸ್ಯಾಂಡಲ್‍ವುಡ್ ಸಮಸ್ಯೆ ಏನು!? ಎಂದು ಕೇಳಿದರೂ ಸಾಕು, ‘ಪರಭಾಷೆ ಚಿತ್ರಗಳ ದಾಳಿ’, ‘ಕನ್ನಡಿಗರು ಚಿತ್ರಮಂದಿರಕ್ಕೆ ಬರುವುದಿಲ್ಲ’ , ‘ಕನ್ನಡ ಚಿತ್ರಗಳನ್ನು ನೋಡುವುದಿಲ್ಲ’, ಎಂಬೆಲ್ಲಾ ಉದ್ಧುದ್ದ ಭಾಷಣ ಬಿಗಿಯುತ್ತಾರೆ. ಅವರು ಹೇಳುವ ಮಾತು ಸರಿಯಾಗಿಯೇ ಇರಬಹುದು ಹಾಗೆಯೇ ಅದಕ್ಕೆ ಕಾರಣಗಳು ಹಲವಿರಬಹುದು ಆದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನಗೆ ತೋರುವುದೇನೆಂದರೆ, ಈ ಎಲ್ಲಾ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಚಿತ್ರರಂಗವೇ ಹೊಣೆ!... ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು.
ಕನ್ನಡ ಚಿತ್ರರಂಗಕ್ಕೆ ತವರು ಮನೆಯಾಗಿರುವ ಗಾಂಧಿನಗರದಲ್ಲೇ, ಇಂದು ನಮ್ಮ ಭಾಷೆಯ ಹೀರೋಗಳ ಕಟೌಟ್  ಬೀಳಬೇಕಾದ ಸ್ಥಳಗಳಲ್ಲಿ, ಅನ್ಯಭಾಷೆಯ ಹೀರೋ ಒಬ್ಬನ ಕಟೌಟ್ ನಿಲ್ಲಿಸಿ ಅವರ ಸಿನಿಮಾಗಳನ್ನು ಗೆಲ್ಲಿಸುವಷ್ಟು ಆಳವಾದ ಬೇರನ್ನು ಬಿಟ್ಟಿದೆ ಪರಭಾಷೆ. ವರ್ಷಗಳ ಹಿಂದೆ ಮೆಜೆಸ್ಟಿಕ್ ಒಂದರಲ್ಲೇ ಸಾಲು ಸಾಲಿದ್ದ ಸಿನಿಮಾ ಥೀಯೇಟರ್‍ಗಳು ಇಂದು  ಕೆಲವೇ ಕೆಲವು ಎಣಿಕೆಗಳಿಗೆ ಬಂದು ನಿಂತಿದೆ. ಇನ್ನೂ ರಾಜ್ಯದ ವಿವಿಧ ಪ್ರದೇಶಗಳಲ್ಲಿದ್ದ ಅದೆಷ್ಟೋ ಚಿತ್ರಮಂದಿರಗಳು ಹೇಳ ಹೆಸರಿಲ್ಲದಂತೆ ಮುಚ್ಚಿದೆಯೋ ನಾ ಕಾಣೆ...
ಯಾಕೆ ಈ ಸಮಸ್ಯೆ???, ಯಾಕೆ ಈ ಸಂಕಷ್ಟ???.
ಒಂದು ಕಡೆ ಹೈ ಬಜೆಟ್, ಇನ್ನೊಂದು ಕಡೆ ಡಬ್ಬಿಂಗ್ ಭೂತ. ಇವೆರಡು ಕನ್ನಡ ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿದ್ದು, ವಾರಂಪ್ರತಿ ಎಷ್ಟೆóóಷ್ಟೋ ಸಿನಿಮಾಗಳು ತೆರೆ ಕಂಡರೂ, ಚಿತ್ರಮಂದಿರ ಸಿಗದೇ  ಎತ್ತಂಗಡಿಯಾಗುತ್ತಿರುವುದು ನೋಡಿದರೆ ಕನ್ನಡಕ್ಕೆ, ಕನ್ನಡ ಚಿತ್ರಗಳಿಗೆ ಎಷ್ಟೆಲ್ಲಾ ಸಂಚಕಾರ ಬಂದಿದೆ ಎಂಬುದನ್ನು  ಅರಿಬಹುದಾಗಿದೆ. ಕನ್ನಡ ಚಿತ್ರಗಳು ಗೆಲ್ಲಬೇಕಾದ ಪ್ರಮುಖ ಭಾಗಗಳಲ್ಲೇ ಪರಭಾಷೆ ಚಿತ್ರಗಳು ತಮ್ಮ ದರ್ಪವನ್ನು ತೋರ್ಪಡಿಸುತ್ತಿದ್ದರೂ, ಕೈ ಕಟ್ಟಿ ಕುಂತಿದೆ ನಮ್ಮ ವಾಣಿಜ್ಯ ಮಂಡಳಿ. ಇದಕ್ಕೇನಂತೀರಾ?...
 ರಾಜ್ಯದಲ್ಲಿ ಪರಭಾಷೆ ಚಿತ್ರಗಳ ಹಾವಳಿ ತಡೆಯಲು ಚಲನಚಿತ್ರ ಮಂಡಳಿ ಯಾವುದೇ ಆಸಕ್ತಿ ತೋರುತ್ತಿಲ್ಲ. ಖುರ್ಚಿಯಲ್ಲಿರುವವರಿಗೆ ಕೇವಲ ಅಧಿಕಾರ ಅನುಭವಿಸುವುದೊಂದೆ ಧ್ಯೇಯವಾಗಿದೆ. 1934 ರಲ್ಲಿ ತೆರೆಕಂಡ ‘ಸತಿಸುಲೋಚನ’ ಎಂಬ ಮೊದಲ ವರ್ಣಮಯ ಚಿತ್ರ ಕಾಲಿರಿಸಿದ್ದರಿಂದ ಹಿಡಿದು ರಾಜ್ ಮತ್ತು ವಿಷ್ಣುವರ್ಧನ್‍ರವರ ಕೊನೆ ದಿನಗಳವರೆಗೂ ಕನ್ನಡ ಚಿತ್ರರಂಗ ಮೇರು ಶಿಖರದ ಹೆಸರು, ಅಭಿಮಾನ, ಅವಕಾಶ, ಗೆಲುವು ಎಲ್ಲವನ್ನು ಹೊಂದಿತ್ತು. ಆದರೆ ಇಂದು ಕಾಲಿರಿಸುತ್ತಿರುವ ಹೊಸ ಹೊಸ ಟೇಸ್ಟ್‍ಗಳು ಇಡೀ ಚಿತ್ರರಂಗವನ್ನೇ ಗುಲ್ಲೆಬ್ಬಿಸಿ ಬಿಟ್ಟಿವೆ. ಮಂಡಳಿಯ ಮುಖ್ಯಸ್ಥರೇ ನಿಮಗ್ಯಾಕೆ ಬೇಕು ಆ ಅಧಿಕಾರ. ನಿಮ್ಮನ್ನಲ್ಲಿ ಕುಳಿಸಿರುವುದು ಕೇವಲ ಸಿನಿಮಾ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸರ್ಕಾರದಿಂದ ಬಿಡುಗಡೆಯಾಗುವ ಕಾಂಚಾಣವನ್ನು ತಮ್ಮ ಖಜಾನೆಗೆ ತುಂಬಿಕೊಳ್ಳುವುದು, ಪತ್ರಿಕೆ, ಟಿ.ವಿ ಚಾನೆಲ್‍ಗಾಗಿ ಆ ಸಿನಿಮಾ, ಈ ಸಿನಿಮಾದ ಪ್ರೆಸ್ ಮೀಟ್ ನಡೆಸಿ  ಅದರಲ್ಲಿಷ್ಟು ದುಡ್ಡು ಹೊಡೆಯುವುದು ಮಾಡುವುದಕ್ಕಲ್ಲ. ಬದಲಾಗಿ ಎಲ್ಲಿ ನಮ್ಮ ಭಾಷೆಯ ಚಿತ್ರಗಳಿಗೆ ಅಡ್ಡಿ ಬರುತ್ತಿದೆ?, ನಮ್ಮ ಭಾಷೆಯ ಚಿತ್ರ ಬಿಡುಗಡೆಗಳ ಸಮಸ್ಯೆ ಏನು!?, ಇತ್ಯಾದಿಗಳ ಬಗ್ಗೆಯೂ ಚರ್ಚಿಸಿ, ಗಮನಿಸಿ ಹೋರಾಡಲಿ ಎನ್ನುವುದಕ್ಕೆ...ಬಹುಶಃ ಇದು ನಿಮಗೆಲ್ಲಿ ತಿಳಿಯುತ್ತೇ. ಹೊರಗೆ ಒದ್ದಾಡಿ ಸಾಯುವವರು ನೀವಲ್ಲವಲ್ಲ...
ಒಂದು ಅಂದಾಜಿನ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ತೆಲುಗು ಚಿತ್ರಗಳು 60 ಕ್ಕೂ ಹೆಚ್ಚಿನ ಚಿತ್ರಮಂದಿರ, ತಮಿಳು ಚಿತ್ರಗಳು 40 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿವೆಯಂತೆ. ಹೀಗಿರುವಾಗ ಕನ್ನಡ ಸಿನಿಮಾಗಳನ್ನು ನೋಡಬೇಕೆಂದರೂ ಎಲ್ಲರಿಗೂ ನೋಡಲಾಗುತ್ತದೆಯೇ!!?  ನೀವೇ ಹೇಳಿ...
ಬಹುಶಃ ಬೆಂಗಳೂರಿ£ ಒಳಪ್ರದೇಶವೆನಿಸಿಕೊಂಡಿರುವ ಕೆಲವೊಂದು ಸಂಧಿಗೊಂದಿಗಳಿಗೆ ಹೋದರೆ ಕನ್ನಡ ಭಾಷೆ ಮಾತನಾಡುವವರೆ ಸಿಗುತ್ತಿಲ್ಲ, ಅಂಥದ್ದರಲ್ಲಿ ಕನ್ನಡ ಸಿನಿಮಾಗಳು ನೋಡಲು ಸಿಗುತ್ತವೆಯೇ!?. ಎಷ್ಟೋ ಜನ ಸಿನಿಮಾ ನೋಡಲು ಮಲ್ಟೀಪ್ಲೆsÉಕ್ಸ್‍ಗಳಿಗೆ ದುಬಾರಿ ಹಣವನ್ನು ಕೊಟ್ಟು ಕೂರಬೇಕಾದ ಸಂಧರ್ಭ ಇಂದೊದಗಿದೆ ಎಂದರೆ ಅದಕ್ಕೆ ಈ ಮೇಲಿನ ಸಮಸ್ಯೆಯೇ ಕಾರಣ. ಅಂತಹವರಲ್ಲಿ ನಾನು ಒಬ್ಬ. ಯಾಕೆಂದರೆ ನಮ್ಮ ಏರಿಯಾದಲ್ಲಿ ಹಾಲು ಮಾರುವವನು ಕೂಡ ಕನ್ನಡ ಮಾತನಾಡುತ್ತಿಲ್ಲ. ನಮ್ಮ ಏರಿಯಾದಲ್ಲಿ ಒಂದೇ ಒಂದು ಕನ್ನಡ ಸಿನಿಮಾವನ್ನು ಪ್ರದರ್ಶನಕ್ಕಿಡುತ್ತಿಲ್ಲ. ಕನ್ನಡ ಸಿನಿಮಾ ನೋಡಬೇಕು ಎಂದರೆ ನಗುತ್ತಾರೆ. ಅತ್ತ ಕಡೆ ಮಲ್ಟೀಫ್ಲೇಕ್ಸ್ ಥೀಯೇಟರ್‍ಗಳು ದುಬಾರಿ ಹಣ ಪಡೆದು ಸಾಯಿಸುತ್ತಾರೆ...ಎಲ್ಲಿಗೆ ಹೋಗಲಿ ನಾನೊಬ್ಬ ಸಾಮಾನ್ಯ ಪ್ರೇಕ್ಷಕ. ಪ್ರೇಕ್ಷಕ ನೊಂದರೆ ಸದಭಿರುಚಿಯೂ ನೋಯುವುದಿಲ್ಲ, ಕಡಿಮೆಯಾಗುವುದೂ ಇಲ್ಲ. ಬದಲಾಗಿ ಬೇರೆ ಕಡೆ ವಾಲಬಹುದು ಎಚ್ಚರವಹಿಸಿ...
ಭಾಷೆಯ ಮೇಲಿನ ಅಭಿಮಾನ ಹಾಗೂ ಉತ್ತಮ ಚಿತ್ರಗಳು ಬಂದರೆ ಬೇರೆ ಭಾಷೆಯ ಯಾವುದೇ ಚಿತ್ರ ರಿಲೀಸ್ ಆದರೂ ಅದನ್ನು ಬದಿಗಿಟ್ಟು  ಕನ್ನಡ ಸಿನಿಮಾ ನೋಡಲು  ಜನರು ಬಂದೇ ಬರುತ್ತಾರೆ. ಹಾಗಂದ ಮಾತ್ರಕ್ಕೆ ಕನ್ನಡದಲ್ಲಿ ಉತ್ತಮ ಚಿತ್ರಗಳು ಕಡಿಮೆ ಇವೆ ಅಂತಲ್ಲ ಆದರೆ ಅದು ಪರಭಾಷೆ ಚಿತ್ರದೊಂದಿಗೆ ಪೈಪೋಟಿ ಇಳಿಯಲು ಸಿದ್ಧವಿಲ್ಲ. ಇಳಿದರೂ ಸೋಲಬೇಕಾದ ಪರಿಸ್ಥಿತಿ ನಮ್ಮವರೇ ತಂದಿದ್ದಾರೆ. ಕಾರಣ ‘ಚಿತ್ರಮಂದಿರಗಳ ಅಭಾವ’.
ಯಾವ ಭಯವೂ ಬೇಡ ನಮ್ಮಲ್ಲಿ ಬ್ಯುಸಿನೆಸ್‍ಗೇನೂ ಕೊರತೆ ಇಲ್ಲ. ಸಮಸ್ಯೆ ಎಲ್ಲಿಯೂ ಇಲ್ಲ ನಮ್ಮೊಳಗೆ ಇದೆ. ಖುರ್ಚಿಯಲ್ಲಿ ಕುಳಿತಿರುವವರು ಎದ್ದು ನಿಲ್ಲುತ್ತಿಲ್ಲ, ಅಧಿಕಾರ ದಾಹ ತೀರುತ್ತಿಲ್ಲ, ಹೆಸರು ಮಾಡಿರುವವರು ಕ್ರೀಯಾತ್ಮಕವಾಗಿ ಕೆಲಸ ಮಾಡುತ್ತಿಲ್ಲ,  ಹೆಸರಿಲ್ಲದವರು ಬಡಾಯಿ ಮಾತುಗಳನ್ನಾಡುವುದು ಬಿಡುತ್ತಿಲ್ಲ. ತಣ್ಣಗಿರುವಾಗ ಇದೆಲ್ಲಾ ನಮ್ಮದಲ್ಲವೆಂದು ತಮ್ಮ ಪಾಡಿಗೆ ಅವರವರ ಚಿತ್ರ ಬಿಡುಗಡೆ ಮಾಡಿ ಹಣ ಸಂಪಾದಿಸಿಕೊಂಡು ಸುಮ್ಮನೆ ಕೂರುವರಿಗೇನು ಕಡಿಮೆ ಇಲ್ಲ. ಕನ್ನಡ ಚಿತ್ರರಂಗದ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಯಾರೂ ಪ್ರಯತ್ನಿಸುತ್ತಿಲ್ಲ. ಅನ್ಯಭಾಷೆಯ ಚಿತ್ರಕ್ಕೆ ಕೋಟಿ ಕೋಟಿ ಸುರಿದು ಖರೀದಿಸುವವರು ನಮ್ಮ ಭಾಷೆಯ ಚಿತ್ರಗಳನ್ನು ಮುಟ್ಟಿ ಮೂಸುತ್ತಿಲ್ಲ...
ಇಂತಹ ಸಮಸ್ಯಾ ಸಂಧಿಯಲ್ಲಿ ಸಿಲುಕಿರುವ ಚಿತ್ರೋದ್ಯಮ ಈ ಹೊತ್ತಿನಲ್ಲಿ ಒಗ್ಗಟ್ಟು ಪ್ರದರ್ಶಿಸಲೇಬೇಕಾಗಿದೆ. ನಿರ್ದೇಶಕರು ನಿರ್ಮಾಪಕರು ಮಾತ್ರವಲ್ಲದೇ ನಟ- ನಟಿಯರು ಕೂಡ ಪರಭಾಷೆಯ ಹಾವಳಿ ತಡೆಯಲು ಮುಂದಾಗಬೇಕಾಗಿದೆ. ಈ ಹಿಂದೆ ಪರಭಾಷೆಯ ಚಿತ್ರಗಳು ಕೇವಲ ಇಪ್ಪತ್ತೇಳು ಚಿತ್ರಮಂದಿರದಲ್ಲಿ ಮಾತ್ರಾ ಬಿಡುಗಡೆಯಾಗಬೇಕು ಎನ್ನುವ ಒಪ್ಪಂದ ರೂಡಿಯಲ್ಲಿತ್ತು. ಆದರೆ ಆ ನಂತರ ಕೆಲವು ಚಿತ್ರಗಳು ಇನ್ನೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗತೊಡಗಿದವು. ಕೊನೆಗೆ ಅದು ನ್ಯಾಯಾಲಯದ ಮೆಟ್ಟಿಲೇರಿತು. ತೀರ್ಪು ಪರಭಾಷಿಕ ಚಿತ್ರ ತಯಾರಕರ ಪರವಾಗಿ ಬಂತು. ಇದರಿಂದ ಇನ್ನಷ್ಟು ಹೊಡೆತ ನಮಗಾಯಿತು. ಕೆಲ ವರ್ಷಗಳ ಹಿಂದೆ ಮಲಯಾಳಿ ಚಿತ್ರಗಳು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರಲಿಲ್ಲ. ಆದರೆ ಇದೀಗ ಅವು ಕೂಡ  ಲಾಭ ಮಾಡಿಕೊಳ್ಳುತ್ತಿವೆ. ತಮಿಳುನಾಡು ಸರ್ಕಾರ ಪರಭಾಷಾ ಚಿತ್ರಗಳ ಬಿಡುಗಡೆಗೆ ಸಂಬಂಧಿಸಿದಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದ್ದು ಈ ಬಗ್ಗೆ ನಾವು ಕೂಡ ಚಿಂತನೆ ನಡೆಸಬೇಕಾಗಿದೆ.
ವರನಟ ಡಾ. ರಾಜ್‍ಕುಮಾರ್‍ರವರು ಅಂದು ನನ್ನ ಕ್ಷೇತ್ರ ಅಲ್ಲ ಎಂದು ಗೋಕಾಕ್ ಚಳುವಳಿಯಲ್ಲಿ ಇಳಿಯದಿದ್ದರೆ, ಚಳುವಳಿಗೆ ಅಷ್ಟು ಜನ ಸೇರುತ್ತಲೇ ಇರಲಿಲ್ಲ, ಚಳುವಳಿ ಆಗುತ್ತಲೇ ಇರಲಿಲ್ಲ. ಅವರ ಸಿನಿಮಾಗಳನ್ನು ನೋಡಿ ಬೆಳೆದವರು ನಾವು. ಅವರ ಸಿನಿಮಾಗಳಿಂದ, ಅವರ ನಡವಳಿಕೆಗಳಿಂದ ಕೆಲವನ್ನಾದರೂ ಅನುಸರಿಸಿದರೆ  ಕನ್ನಡ ಮತ್ತು ಕರ್ನಾಟಕ ಚಿತ್ರರಂಗ ಮತ್ತೆ ಹಿಂದಿನ ದಿನಗಳನ್ನು ನೋಡಬಹುದು!!! ಎನಿಸುತ್ತದೆ. ಏನಂತೀರಾ???...

No comments:

Post a Comment