Tuesday 14 June 2016

ಮಳೆಗೆ ಶುರು ಬಾಲ್ಯದ ನೆನಪ ತೇರು



ಬರಡಾಗಿ ಬೆಂಡಾದ ಭುವಿಗೆ ತಂಪಾಗೋ ಕಾಲ ಸನ್ನಿಹಿತವಿನ್ನೂ..
ಶುರುವಾಗುತ್ತದೆ ಎಲ್ಲೆಲ್ಲೂ ಹನಿಮಳೆಯ ಪುಳಕವಿನ್ನೂ...

ಜಯಂತ್ ಕಾಯ್ಕಿಣಿ ಹೇಳುವಂತೆ "ಮಳೆಯ ಹನಿಯಲ್ಲಿ ಕೂತು ಇಳೆಗೆ ಬಂದಂತೆ ಮುಗಿಲು"..
ನಿಜ.! ಎಂಥಾ ಸಾಲುಗಳಲ್ವಾ!, ಇಷ್ಟುದಿನ ಮೇಲೆ ತೇಲಾಡುತ್ತಿದ್ದ ಮೋಡಗಳು, ಇಳೆಗೆ ಹನಿಯಾಗಿ ಮುಗಿಲನ್ನು ತರುವ ಸನ್ನಿಹಿತ ಬರುತ್ತಿದೆ.ಮೋಡಗಳೆಲ್ಲಾ ಮುಗಿಲಾಗುವ ಕಾತರಿಕೆಯಲ್ಲಿ ತಾ ಮುಂದು ನಾ ಮುಂದು ಎಂದು ಬಂದು ಒಬ್ಬೋಬ್ಬರಿಗೆ ಇಷ್ಟ, ಇನ್ನೂ ಕೆಲವರಿಗೆ ಕಷ್ಟವಾಗೋ ಪ್ರಮಯವೂ ಬರುತ್ತಿದೆ..ಆದ್ರೂ ಮಳೆಕೊಡುವ ನೆನಪು, ಖುಷಿ, ಬಹುಹಿಂದಿನ ಪುನರ್ಮಿಲನದ ಭಾವನೆ, ಪುಳಕ, ಇನ್ಯಾವುದು ಕೊಡಲಾರವು ಅಲ್ವಾ..ಅದೇಷ್ಟೋ ನೋವು-ನಲಿವು, ದುಃಖ-ದುಮ್ಮಾನಗಳು ಜೊತೆ ಇದ್ದರೂ ಒಮ್ಮೆ ಹನಿಮಳೆಯಲಿ ಕೈಚಾಚಿ ಭಾವಪೂರ್ಣವಾಗಿ ನೆನೆದರೆ ಅದರ ಹಿತವೆ ಬೇರೆ ಮುಖ್ಯವಾಗಿ ಅದು ನೀಡೊ ಬಾಲ್ಯ ಜೀವನದ ಆ ಸುಖವೆ ಬೇರೆ ಅಲ್ವಾ!.

ಆಗೆಲ್ಲಾ ನಮ್ಮ ಚಿಕ್ಕವಯಸ್ಸು, ಹರಿದಕೊಡೆಯ ಜೊತೆ, ತುಂಬು ಭಾರದ ಚೀಲಾ ಬಗುಲಲ್ಲಿ..ಜೊತೆಗೆ ಮಧ್ಯಾಹ್ನದ ತಂಪು ಊಟದ ಬುತ್ತಿ(ಇಗಿನ ಮಕ್ಕಳದ್ದು ಬಿಸಿಯೂಟ),ಶಾಲೆಯ ಪ್ರಾರಂಭದ ದಿನಗಳೇ ಮಳೆಯ ಚಳಿ..ರಸ್ತೆಯ ಕೆಂಪುಮಣ್ಣಿನ ಪಾಕದ ಮೇಲೆ ಸವಾರಿ ಅಲ್ಲಲ್ಲಿ ಹರಿಯೋ ಸಣ್ಣ ಜರಿಗಳಲ್ಲಿ ಮೀನು ಹಿಡಿದುಬಿಡೊ ಆಟ..ಆಗ ಬರುತಿದ್ದ ಪ್ಯಾರಗಾನ್ ಚಪ್ಪಲಿ.,, ಇದೆ ಮೊದಲಾದವುಗಳ ಸಂಘಮ..

ಸ್ವಲ್ಪ ದುಡ್ಡಿರೋರು ತಮ್ಮ ಮಕ್ಕಳಿಗೆ ಹೊಸ ಕೊಡೆಯನ್ನ ತೆಗೆಸಿಕೊಟ್ಟರೆ, ನಮ್ಮ ಬಡವರ ಪಾಡು ನಡೆದಿದ್ದೆ ಹರಿದ ಹಿರಿದಾದ ಉದ್ದನೆಯ ಹಿಡಿಯ ನಡುವೆ..ಆ ಸುಖವೆ ಒಂಥರ ಬೇರೆ;ನಡುದಾರಿಯಲ್ಲಿ ಗಾಳಿಮಳೆಗೆ ಸಿಕ್ಕ ಛತ್ರಿ ಮೇಲಕ್ಕೆ ಹಾರಿದ್ದು, ಒಂದೇ ಕೊಡೆಯ ನಡುವೆಅಡಿ ನಾಲ್ಕು ಜನರು ಆಶ್ರಯ ಪಡೆದು ಮೈ ಒದ್ದೆಯೊಂದಿಗೆ ಮನೆ ಸೇರಿದ್ದು, ಅನ್ಯಾಯದ ಮರೆಯುವಿಕೆಯ ನಡುವೆ ಶಾಲೆಯಲ್ಲೆ ಛತ್ರಿ ಮರೆತು ಗೆಳೆಯನ ಜೊತೆ ಆಶ್ರಯ ಕೇಳಿದ್ದು, ರಸ್ತೆಯ ಹೊಂಡದ ನೀರನ್ನ ಕಾಲಲ್ಲಿ ಚೊಗೆದು ಖುಷಿಪಟ್ಟಿದ್ದು, ತೊರೆಗಳಲ್ಲಿ ಮೀನು ಹಿಡಿಯುತ್ತಾ ಕುಳಿತು ಸಮಯ ಮರೆತು ಮಾಸ್ಟರ್ ಹತ್ತಿರ ಭೈಸಿಕೊಂಡಿದ್ದು, ಹೊಸ ಕೊಡೆಬೇಕು ಅಂತಾ ಅಮ್ಮನ ಹತ್ತಿರ ಗೋಗೆರೆದಿದ್ದು, ಲೋ ಮಳೆರಾಯ ಇವತ್ತು ಇಡೀ ಬಾ ಶಾಲೆಗೆ ರಜೆ ಕೊಡುತ್ತಾರೆ ಅಂತ ಮಳೆರಾಯನಿಗೆ ಭುವಿಯಿಂದಲೇ ಕರೆಕೊಟ್ಟಿದ್ದು.., ಹೀಗೆ ಹಲವು ಅಂಶಗಳು ಸವಿಮಳೆಯ ಮೆಮೋರಿಯಲ್ ಮೆಮೋರೇಬಲ್ ಆಗೆ ಕುಳಿತು ನಮ್ಮೇದೆಯಲ್ಲಿ ಕಚಗುಳಿಯ ಪುಳಕವೆಬ್ಬಿಸಿದರೆ ಆಶ್ಚರ್ಯ ಪಡಬೇಕಿಲ್ಲಾ ಅಲ್ವಾ .ನಿಮಗೂ ಇಗ ನಿಮ್ಮ ಹಳೆಯ ಮೆಮೋರೆಬಲ್ ನೆನಪಿನ ಸವಿ ಕಾಡುತ್ತಾ ಇದ್ಯೆನೋ ಅಲ್ವ..

ನೀವು ಒಮ್ಮೆ ಸಖತ್ತಾಗಿರೋ ಅನುಭವ ಪಡಿಬೇಕು ಅಂದ್ರೆ ಹನಿ ಮಳೆಯಲ್ಲಿ ಹಾಯಾಗಿ ಬಾನಿಗೆ ಮುಖಚಾಚಿ , ಕಣ್ಮುಚ್ಚಿ ನೆನೆದು ಬಾಲ್ಯದ ಸವಿ ನೆನಪನ್ನ ಸವಿಯಿರಿ..
ಹಾ..,! ಶೀತ ಜ್ವರ ಬರೋತರ ನೆನಿಬೇಡಿ ಅಮೇಲೆ ಕಷ್ಟವಾದೀತು.. ನಿಮಗೆ ಎನನಿಸಿತ್ತು ಮಳೆಯಲ್ಲಿ ನೆನೆದಾದ ಮೇಲೆ ನನಗೂ ತಿಳಿಸಿ..


No comments:

Post a Comment