Monday 13 June 2016

ಕವಿ ಕನವರಿಕೆ - ಪ್ರೇಮಾಯಣ...


-ಸ್ಯಾಂಡಿ...

ಕಾತರಿಕೆ ಅವಳ ಮನದಲ್ಲಿ ಹನಿಯಂತೆ ಜಿನುಗುತ್ತಿತ್ತು. ಸುಂದರತೆಯ ವೈಭೋಗವು ಹುಟ್ಟಿನಿಂದಲೇ ಬಳುವಳಿಯಾಗಿ ಅವಳಿಗಪ್ಪಿತ್ತು. ಮುಂಜಾನೆ ಬಿಸಿಚಳಿಯ ಗಾವು ನಡುಕತೆ ಸೃಷ್ಟಿಸುತ್ತಿದ್ದರೂ, ಹೊಸ ಭೇಟಿಗೆ, ಹೊಸ ಕಂಪನತೆಗೆ ಬೇಗನೆ ಎದ್ದು ಅಂದಕ್ಕಿಂತ ಅಂದವಾಗಿ ಸಿಂಗಾರ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಳು ಆಕೆ. ಕಾರಣ ಇಷ್ಟೇ ಅರಿಯದ ಪ್ರೀತಿಯಲ್ಲಿ ಬಿದ್ದಿದ್ದ ಅವಳಿಗೆ ನವಿರಾದ ಪ್ರೇಮಾಂಕುರವಾಗಿದ್ದು ಪಕ್ಕದೂರಿನ ಹುಡುಗನ ಜೊತೆ. ಅವರಿಬ್ಬರ ಪ್ರಥಮ ಭೇಟಿಯ ಚಡಪಡಿಕೆಯೇ ಇವಳ ಈ ದಿನದ ಪಯಣಕ್ಕೆ ಹೊಸ ರೂಪದ ಇಂಪಾಗಿತ್ತು.

ಅದೇನೋ ತಳಮಳ, ಅದೇನೋ ನಾಚಿಕೆ, ಕೆಂಪಾದ ಕೆನ್ನೆತುಂಬೆಲ್ಲಾ ಹೊಸ ಅಪ್ಪುಗೆ ದೊರೆಯುವ ವೈಯಾರ, ನಿಂತಲ್ಲಿ ನಿಲ್ಲಲೂ ಬಿಡದೆ ಮನೆಯಿಂದ ನಡೆ ಹೊರಡುವಂತೆ ಮಾಡಿತ್ತು.

 ಆಗಲೇ ಸೂರ್ಯ ಬೆಟ್ಟಗುಡ್ಡಗಳನ್ನು ಸೀಳಿ ಮೇಲೆ ಬಂದಿದ್ದ. ಮೊದಲೇ ನಿರ್ಧರಿಸಿದ್ದ ಸ್ಥಳದಲ್ಲಿ ಅವನು ಕಾಯುತ್ತಿದ್ದ. ಕೈಯಲ್ಲೊಂದು ಪ್ರೇಮ ಪತ್ರ ಹಿಡಿದಿದ್ದಾನೆ. ಕಣ್ಣಿಂದ ದೂರ ಇರುವ ಅವಳನ್ನು ಕಣ್ಮಚ್ಚಿ ನೆನಸಿಕೊಳ್ಳುತ್ತಿದ್ದಾನೆ. ಇವಳೋ ಭಯಪಡುತ್ತಲೇ ಹತ್ತಿರ ಹೋಗಿದ್ದಾಳೆ. ಸಮಯ ಮಿಂಚು ಗುಡುಗುಗಳು ಒಟ್ಟಿಗೆ ಸೇರುವ ಸನ್ನಿಹಿತ... ಇಬ್ಬರೂ ಬೇವತಿದ್ದಾರೆ!... ತುಟಿ ತೊದಲುತ್ತಿದೆ!..ಗಂಟಲು ಸ್ವರ ಕಟ್ಟಿಸುತ್ತಿದೆ!.. ಸೌಂದರ್ಯವರ್ಧಕ ಕರಗಿ ಇವರ ಮಧ್ಯೆ ನಾನಿರಲ್ಲ!!! ನನ್ನ ಅವಶ್ಯಕತೆ ಇಲ್ಲ!!! ಎಂದು ನಾಚಿ ದೂರಸರಿಯುತ್ತಿದೆ!.. ಮಾತನಾಡಬೇಕೆಂದಿದ್ದ ಪದಗಳೆಲ್ಲ ಮೌನದಲ್ಲಿ ನೀನಾಡು!.. ನೀನಾಡು!.. ಎನ್ನುತ್ತಿವೆ. 

      ಬೀಸೋಗಾಳಿಯು, ಇವರ ಬೆವರ ಹನಿಗೆ ಬಾ ತೊಂದರೆ ಮಾಡಬೇಡ ಎಂದು ಆವಿಯಾಗಿಸುತ್ತಿದೆ!..
ಕೊನೆಗೂ ಹುಡುಗನೇ ನಿವೇದಿಸಿದ್ದಾನೆ... ‘ನನ್ನ ಪ್ರತಿ ಹೆಜ್ಜೆಗೂ ನಿನ್ನ ಗೆಜ್ಜೆಯ ಸದ್ದಿರಬೇಕು, ನಿನ್ನ ಪ್ರತಿ ನೋವಿಗೂ ನನ್ನ ಪ್ರೀತಿಯ ಮದ್ದಿರಬೇಕು’...
   ಮುದ್ದಿನ ಹುಡುಗನ ಮುದ್ದು ಮಾತಿಗೆ ಅವಳು ಸೋತು ಸುಣ್ಣವಾಗಿದ್ದಾಳೆ...ಪೆದ್ದುಮುದ್ದಾದ ಪ್ರೀತಿ ಇಬ್ಬರನ್ನು ಬಾಚಿ ತಬ್ಬಿಕೊಂಡಿದೆ...ಸೂರ್ಯನ ಕಿರಣ ನಾಚಿ ಮೋಡ ಸೇರಿದೆ. ಪ್ರಕ್ರತಿಯ ಕಲರವ ಬೆಚ್ಚಿ ಮೌನವಹಿಸಿದೆ...

No comments:

Post a Comment