Monday 4 July 2016

ಮಾಫಿಯಾ... ಬಿಕ್ಷಾ!!, ಮಾಫಿಯಾ... - ಸಿರಿ ಬುಲೆಟ್



ಮಹಾನಗರದಲ್ಲಿ ಹೆಚ್ಚುತ್ತಿದೆ ಭಿಕ್ಷೆಯ ಅತಿರೇಕತೆ....
ನಿಲ್ಲದ ಭಿಕ್ಷಾಟನೆಗೆ, ಉಚ್ಚಾಟನೆಯೇ ಮದ್ದು...
ಚಿಲ್ಲರೆಗೆ ಬೆಲೆ ಇಲ್ಲ, ಡೆಬಿಟ್ಟು ಕ್ರೆಡಿಟ್ಟು...ಬರೀ ನೋಟು ನೋಟು...
ದುಡ್ ಮಾಡೋ ದುನಿಯಾ ; ಭಿಕ್ಷಾ ಮಾಫಿಯಾ...

   
           ಬೆಂಗಳೂರು ದಿನೇ ದಿನೇ ಬೆಳೆಯುತ್ತಿದೆ. ನಗರೀಕರಣ, ವ್ಯಾಪಾರಿಕರಣ ಹಾಗೂ ಇನ್ನಿತರ ಹತ್ತು ಹಲವು ಔದ್ಯೋಗೀಕರಣಗಳಿಂದ ಲಕ್ಷಾಂತರ ಮಂದಿಗೆ ಉದ್ಯೋಗ ಧಾತನಾಗಿ, ಹೊಟ್ಟೆ ಬಟ್ಟೆಯ ಒಡೆಯನಾಗಿ ಸಿಲಿಕಾನ್ ಸಿಟಿ ಗಾಂಭೀರ್ಯ ತೋರಿಸುತ್ತಿದೆ. ಬಹಳ ಹಿಂದೆ ನಾಡು ನುಡಿಯ ಗಂಧದ ಕಂಪನ್ನು ಅರಿತ ಅನೇಕರು, ಬೆಂಗಳೂರು ಎಲ್ಲಾ ವಲಯಗಳಿಗಿಂತಲೂ ಅತ್ಯಂತ ಸುರಕ್ಷಿತ ಪ್ರದೇಶ ಎಂದು ಸಾರಿದ್ದು ಇನ್ನಷ್ಟು ಜನ ಇಲ್ಲಿಗೆ ಬಂದು ನಿರ್ಭೀತರಾಗಿ ನೆಲೆ ನಿಲ್ಲಲು ದಾರಿಯಾಗಿತ್ತು. ಇಲ್ಲಿನ ಪರಿಸರ, ಹವಾಮಾನ, ಜೌದ್ಯೋಗಿಕ ನೆಲೆಗಟ್ಟು ಇತ್ಯಾದಿಗಳೆಲ್ಲವೂ ಉತ್ತಮ ಆರೋಗ್ಯದ ಜೊತೆಗೆ ಸುಖಮಯ ಜೀವನವನ್ನು ನಡೆಸಬಹುದಾದ ಮಾರ್ಗಗಳನ್ನು ತೋರಿಸಿತ್ತು.
     ಆದರೆ ಈಗ!, 
     ಬೆಂಗಳೂರು ಇಸ್ ನಾಟ್ ಎ ಸೇಫ್ಟಿ ಸಿಟಿ...
ಎಸ್!.. ಇತ್ತೀಚೆಗೆ ಎಲ್ಲಿ ಹೋದರು ಸದಾ ಒಂದಿಲ್ಲೊಂದು ಬಗೆಯ ಸುಲಿಗೆ ಬೆಂಗಳೂರಿನ ಮಂದಿಗೆ ಖಾಯಂ ಆಗಿದೆ. ಎಲ್ಲಿಂದಲೋ ಜನ ವಲಸಿಗರಾಗಿ ಇಲ್ಲಿಗೆ ಬರುತ್ತಿದ್ದಾರೆ!, ಏನೇನೋ ವ್ಯವಹಾರ ನಡೆಸುತ್ತಿದ್ದಾರೆ!. ಹಣ ಗಳಿಸುವ ವ್ಯಾಮೋಹತನದಿಂದ ಮನುಷ್ಯತ್ವವನ್ನು ಮರೆತು ವ್ಯವಹರಿಸುತ್ತಿದ್ದಾರೆ. ಈ ಹಿಂದಿನ ಸಂಚಿಕೆಯಲ್ಲಿ ಓಲಾ ಕ್ಯಾಬ್‍ಗಳ ‘ಪೀಕ್ ಚಾರ್ಜಸ್’ ಎನ್ನುವ ಉಲಾಲದ ಆಟ ಮತ್ತು ಅವರ ಕೊಳ್ಳುಬಾಕತನದ ಪೂರ್ತಿ ಚಿತ್ರಣವನ್ನು ನಾವು ನಿಮಗೆ ನೀಡಿದ್ದೆವು. ಅದು ದೊಡ್ಡ ಸುದ್ಧಿ ಕೂಡ ಆಗಿದ್ದನ್ನು ನೀವೂ ಓದಿರಬಹುದು. ಇದೀಗ ಅಂತಹದ್ದೇ ಇನ್ನೊಂದು ಮಾಫಿಯಾ ಮಹಾನಗರದಲ್ಲಿ ಬೀಡು ಬಿಟ್ಟಿದ್ದು, ದಂಧೆಯಂತೆ ಎಲ್ಲಾ ಪಟ್ಟಣಗಳಲ್ಲೂ ಶರವೇಗದಿಂದ ಹರಡುತ್ತಿರುವುದು ನಮ್ಮ ಕಣ್ಣಿಗೆ ಬಿದ್ದಿದೆ. ಅದರ ಒಂದು ಸಮೀಕ್ಷೆಯ ಮಜಲನ್ನು ನಿಮಗೂ ತಿಳಿಸಿ  ಎಚ್ಚರಿಸುವ ಪುಟ್ಟ ಪ್ರಯತ್ನವೇ ಈ ‘ಸಿರಿ ಬುಲೆಟ್ ಮುಲಾಜೆ ಇಲ್ಲ’ ಎನ್ನುವ ಅಂಕಣದ ಮೂಲ ಉದ್ದೇಶ. ಸಾಧ್ಯವಾದರೆ ಓದಿ ಎಚ್ಚೆತ್ತುಕೊಳ್ಳಿ!..
  
 ಏನದು!!? ಎನ್ನುವ ಪ್ರಶ್ನೆಯಾ!?

ಅದುವೇ ‘ಭಿಕ್ಷಾ ಮಾಫಿಯಾ’...

   ಡೈರೆಕ್ಟಾಗಿ ಹೇಳಬೇಕೆಂದರೆ, ಮಹಾನಗರದಲ್ಲಿ ಬಿಕ್ಷುಕರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಉತ್ತರ ಭಾರತ ಮತ್ತು ನೆರೆಯ ರಾಜ್ಯಗಳಿಂದ ಬಿಕ್ಷೆ ಬೇಡುವುದಕ್ಕಾಗಿಯೇ ಜನ ಬರ್ತಿದ್ದಾರೆ. 
      ಎಲ್ಲೆಲ್ಲಿಂದಲೋ ಜನರನ್ನು ನಗರಕ್ಕೆ ಕರೆತಂದು ಭಿಕ್ಷೆ ಬೇಡುವ ದಂಧೆಯಲ್ಲಿ ಹಣ ಮಾಡಿಕೊಳ್ಳುವ ಮಾಫಿಯಾವೇ ಬೆಂಗಳೂರಲ್ಲಿ ಈಗ ಶುರುವಾಗಿದೆ ಎಂದರೆ ನಂಬ್ತೀರಾ!?.

ಹಾ! ಸ್ವಾಮಿ... ನಂಬಲೇಬೇಕು...!!!

ತಲೆ ಕೆಡುತ್ತಿದೆಯಾ!?...

ಮೇಲೆ ಹೇಳಿದ ಎಲ್ಲಾ ವಿಚಾರಗಳು ಅಪ್ಪಟ ಸತ್ಯ!..

ದಿನನಿತ್ಯದಲ್ಲಿ ನಿಮ್ಮ ಕಣ್ಣಿಗೂ ಭಿಕ್ಷುಕರು ಕಂಡಾಗ, ಎಂತಹ ಸಣ್ಣ ಪುಟ್ಟ ಕೆಲಸಮಾಡಿದರು ಜೀವನ ನಡೆಸಬಹುದಾದ ಇಂದಿನ ಕಾಲದಲ್ಲಿ ಬಿಕ್ಷೆ ಯಾಕೆ ಬೇಡುತ್ತಿದ್ದಾರೆಂದು ಅನೇಕ ಬಾರಿ ನಿಮಗೂ ಅನಿಸಿರಬಹುದು. ಆದರೆ ಇದಕ್ಕೆ ಏನು ಕಾರಣ!? ಬಿಕ್ಷೆ ಬೇಡುವ ಇವರೆಲ್ಲಾ ಯಾರು!? ಎಲ್ಲಿಂದ ಬಂದಿದ್ದಾರೆ!? ಯಾವ ಮೈಮುರಿಯುವ ಕೆಲಸವನ್ನು ಮಾಡದೇ ಬಿಕ್ಷೆಯನ್ನೇ ಯಾಕೆ ಬೇಡುತ್ತಿದ್ದಾರೆ!? ಇತ್ಯಾದಿಗಳ ಬಗ್ಗೆ ಎಂದಾದರೂ ಚಿಂತೆ ಮಾಡಿದ್ದೀರಾ!? ಮಾಡಿಲ್ಲವಾದರೆ ಈ ಓದುವಿಕೆಯ ಒಂದೇ ರೌಂಡಪ್‍ನಲ್ಲಿ ನಾವು ನಿಮಗೆ ಅಚ್ಚರಿಯ ಮಾಹಿತಿ ಕೊಡ್ತೀವಿ ಓದಿ. ನಂತರ ಮನನ ಮಾಡಿಕೊಂಡು ಚಿಂತಿಸಿ...ಬದಲಾಗಿ ; ಬದಲಾಯಿಸಿ...
 
         ಹಲವು ಕಡೆ ವಯಸ್ಸಾದವರು ಅಥವಾ ಹರಕು ಬಟ್ಟೆ ತೊಟ್ಟವರು ಕಾಸು ಕೊಡಿ!!, ಕಾಸು ಕೊಡಿ!! ಎಂದು ಅನೇಕ ಬಾರಿ ಕಣ್ಣೆದುರು ಓಡಾಡಿದ್ದನ್ನು ನೀವು ಗಮನಿಸಿರಬಹುದು. ಅದಷ್ಟೇ ಅಲ್ಲದೇ ಇನ್ನೂ ಕೆಲವು ಕಡೆ ಪ್ರಿಂಟೆಡ್ ಕಾರ್ಡ್‍ಗಳನ್ನು ಹಿಡಿದುಕೊಂಡು ನಾವು ಅನಾಥರು, ಯಾವುದೋ ಅನಾಹುತಕ್ಕೆ ಸಿಲುಕಿ ಎಲ್ಲವನ್ನು ಕಳೆದುಕೊಂಡಿರುವೆವು ಸಹಾಯ ಮಾಡಿ ಎಂದು ಕನ್ನಡ, ಇಂಗ್ಲೀಷ್, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ ಬರೆದ ಪ್ರತಿಯನ್ನು ತೋರಿಸಿ ದುಡ್ಡು ಕೀಳುವವರನ್ನು ನೋಡಿರಬಹುದು!. ಅವರ ಕಷ್ಟಗಳು ನಿಜವಿರಬಹುದೆಂದು ನೀವೂ ಸಹಾಯ ಹಸ್ತವಾಗಿ ಅಷ್ಟೋ ಇಷ್ಟೋ ಹಣವನ್ನು ನೀಡಿರಬಹುದು. ಹಾಗೇನಾದರೂ ಮಾಡಿದ್ದೀರೆಂದರೆ ನೀವೂ ಯಾಮಾರಿದ್ದೀರಿ!, ನಿಮ್ಮ ಹಣವನ್ನು ಯಾರೋ ಅನುಕಂಪನದಿಂದ ಎಗರಿಸಿದ್ದಾರೆ ಎಂದರ್ಥ. 
    ನಿಜ!!, ಅವರು ತೋರಿಸುವ, ಎದುರಿಗೆ ಬಂದು ನಾಟಕವಾಡುವ ಯಾವುದೂ ನಡೆದೆ ಇರುವುದಿಲ್ಲ. ಅವ್ಯಾವುದು ನಿಜವೂ ಅಲ್ಲ. ಇದರ ಹಿಂದೆ ಭಿಕ್ಷಾಟನೆಯ ಬಹುದೊಡ್ಡ ಮಾಫಿಯಾವೇ ಇದೆ. ಅದಕ್ಕೂ ಒಬ್ಬ ಒಡೆಯನಿರುತ್ತಾನೆ. ಅವನ ಆಳುಗಳೇ ಆ ಮಕ್ಕಳೋ!, ಮನುಜರೋ!! ಆಗಿರುತ್ತಾರೆ. ಅಥವಾ ಸ್ವಂತ ಉದ್ಯಮವೆನ್ನುವಂತೆ ಮಾಡುತ್ತಿರುತ್ತಾರೆ.

     ನಗರದ ಟ್ರಾಫಿಕ್ ಸಿಗ್ನಲ್‍ನಲ್ಲಿ ವಾಹನ ನಿಲ್ಲಿಸಿದ ತಕ್ಷಣ ಸಂಧಿಗೊಂದಿಯಿಂದ ಮೂರ್ನಾಲ್ಕು ಮಹಿಳೆಯರು ಬೀದಿಗಿಳಿಯುತ್ತಾರೆ. ಕಂಕುಳಲ್ಲೊಂದು ಎಳೆ ಮಗುವನ್ನು ಇರಿಸಿಕೊಂಡು ಅದರ ಕಡೆ ಕೈ ತೋರಿಸಿ ಹಣ ಕೇಳುತ್ತಾರೆ. ಆ ದ್ರಶ್ಯ ಅನೇಕರ ಮನಕಲಕಿ ಕೈಗೆ ಸಿಕ್ಕ ಹಣವನ್ನು ಕೊಡುವಂತೆ ಪ್ರೇರೆಪಿಸುತ್ತೆ. ಆ ಟ್ರಾಫಿಕ್ ಸಿಗ್ನಲ್‍ನಲ್ಲಿ ಇಡೀ ದಿನ ಇದೆ ಕಥೆ ಮುಂದುವರಿಯುತ್ತದೆ. ನೀವು ಇಲ್ಲೊಂದು ವಿಶೇಷತೆಯನ್ನು ಗಮನಿಸಿರಲಿಕ್ಕಿಲ್ಲ!!. ಬೇಕಿದ್ದರೆ ನಾಳೆಯಿಂದಲೇ ಗಮನಿಸಿ... ಕಂಕುಳಲ್ಲಿರುವ ಅವರ ಮಗು ಯಾವಾಗಲೂ ಅರೆ ನಿದ್ರಾವಸ್ಥೆಯಲ್ಲೆ ಇರುತ್ತದೆ!? 

ಚಿಂತಿಸಿ!..

ಯಾಕೆ!?...

     ಈ ವಿಚಾರವನ್ನೇ ಮನಗೊಂಡು ನಮ್ಮ ಸಿರಿ ತಂಡ ಈ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಲು ಮುಂದಾದಾಗ ಸಿಕ್ಕ ದೃಷ್ಟಾಂತವನ್ನು ಕೇಳಿದರೆ ನೀವು ಬೆಚ್ಚಿ ಬೀಳಬಹುದು!..

   
      ನಿಜವಾಗಿಯೂ ಆ ಮಗು ಅವರ ಮಗುವಾಗಿರುವುದೇ ಇಲ್ಲ!. ಅದು ಬಾಡಿಗೆಗೆ ದೊರೆಯುವ ಮಗುವಾಗಿರುತ್ತೆ. ಪ್ರತಿದಿನ ಬೆಳಿಗ್ಗೆ  ದಿನದ ಬಾಡಿಗೆಯಲ್ಲಿ ಮಗುವನ್ನು ಕರೆತರುತ್ತಿದ್ದಾರೆ ಭಿನ್ನಾಣಗಿತ್ತಿಯ ಪ್ರಿಂಟೆಡ್ ಅಮ್ಮಂದಿರು. ಅಷ್ಟೇ ಅಲ್ಲದೇ ಆ ಮಗುವಿಗೆ ಮಂಪರು ಬರುವಂಥ ಔಷಧಿ ಅಥವಾ ಮಧ್ಯವನ್ನು ಕುಡಿಸುತ್ತಾರಂತೆ.  ಅದಕ್ಕಾಗಿಯೇ ಆ ಮಗು ಯಾವಾಗಲೂ ಮಂಪರಲ್ಲೇ ಮಲಗಿರುತ್ತದೆ. ಬಾಡಿಗೆಗೆ ಮಗುವನ್ನು ನೀಡುವಾತ ಅದೆಷ್ಟು ಶ್ರೀಮಂತಿಕೆಯಿಂದ ಬಾಳುತ್ತಿದ್ದಾನೋ ಆ ದೇವರಿಗೆ ಗೊತ್ತು!, ಬಿಕ್ಷೆಯಲ್ಲಿ ದುಡಿಯುತ್ತಿರುವªರಲ್ಲಂತೂ ಚಿಲ್ಲರೆಗೆ  ಬೆಲೆಯೇ ಇಲ್ಲ, ಚಿಲ್ಲರೇ ಕೊಟ್ಟರೂ ಸ್ವೀಕರಿಸುವುದಿಲ್ಲ. ಏನಿದ್ದರೂ ನೋಟೇ ನೀಡಬೇಕು. ಅವರ ಅಕೌಂಟ್‍ಗಳಲ್ಲಿರುವ ದುಡ್ಡು ನಮ್ಮ ನಿಮ್ಮಂತವರಲ್ಲಿಯೂ ಇರಲಿಕ್ಕಿಲ್ಲ ಬಿಡಿ!. ನೋ ಚಿಲ್ಲರೇ!, ಓನ್ಲೀ ಡೆಬಿಟ್ಟು ಕ್ರೆಡಿಟ್ಟು...ಬರೀ ನೋಟು ನೋಟು!!. ಇದು ಎಂಥಾ ಭೀಭತ್ಸವಲ್ಲವಾ!?...ಹಾಡು ಹಗಲ ದಂಧೆಯಲ್ಲವಾ!?.
   
   ಉನ್ನತ ಮಾಹಿತಿಗಳಂತೆ, ಈ ಹಿಂದೆ, ಬೆಂಗಳೂರಿನಲ್ಲಿರುವ ಫೇಕ್ಡ್ ಬಿಕ್ಷುಕರನ್ನು ಹಿಡಿಯಲು ಹೋದಾಗ ಅವರು ಮಕ್ಕಳನ್ನು ಬಿಟ್ಟು ಓಡಿ ಹೋಗಿರುವ ಘಟನೆಗಳು ನಡೆದದ್ದು ಇದೆ ಎಂದು ಖಾಸಗಿ ವರದಿಯೊಂದು ಹೇಳುತ್ತದೆ. ಆ ಮಕ್ಕಳು ಎಲ್ಲಿಯವೋ!? ಯಾರದೋ!? ಒಂದೂ ತಿಳಿದಿಲ್ಲ!, ತಿಳಿಯುವುದು ಇಲ್ಲ!. ಈ ರೀತಿಯ ಬಿಕ್ಷಾಟನೆ ಮಕ್ಕಳ ಕಳ್ಳಸಾಗಣೆಯನ್ನು ಹೆಚ್ಚಿಸುತ್ತಿದ್ದು,    ಸರ್ಕಾರ ಈ ಬಗ್ಗೆ ಎಷ್ಟೇ ಗಮನ ನೀಡಿದರೂ ಅಧಿಕಾರಿಗಳ ನಿದ್ರಾವಸ್ಥೆಯ ವ್ಯವಸ್ಥೆಯಿಂದ ಭಿಕ್ಷೆ ಬೇಡುವ ದಂಧೆ ಇದೀಗ ಮಾಫಿಯಾವಾಗಿ ಬದಲಾಗಿದೆ.

   
        ಇವರಿಷ್ಟೇ ಅಲ್ಲದೇ ಮಂಗಳಮುಖಿಯರೂ ಕೂಡ ಸಿಗ್ನಲ್‍ಗಳಲ್ಲಿ ಚಿತ್ರ ವಿಚಿತ್ರವಾಗಿ ಭಾವ-ಭಂಗಿಗಳನ್ನು ಪ್ರದರ್ಶಿಸಿ ದುಡ್ಡು ಕೀಳುತ್ತಿರುವುದು ಜನರಿಗೆ ಮುಜುಗರ, ಕಿರಿಕಿರಿ ಉಂಟು ಮಾಡುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಭಿಕ್ಷಾ ಕಲೆಕ್ಷನ್‍ನಲ್ಲಿ ಪ್ರತಿ ಒಂದು ಸಿಗ್ನಲ್ ಬಿದ್ದು ಮೂವ್ ಆಗುವ ಹೊತ್ತಿಗೆ 50 ರಿಂದ 100 ರೂಪಾಯಿಯ ಕಲೆಕ್ಷನ್ ಮಾಡಬಹುದಂತೆ!!. ಇದೆಲ್ಲ ಅಕ್ರಮವಲ್ಲದೇ ಇನ್ನೇನು!? ನೀವೇ ಹೇಳಿ!!. 
  ಎಷ್ಟೋ ಕಡೆ ಅನೇಕ ಕಿಡಿಗೇಡಿಗಳು ಮಂಗಳಮುಖಿಯರ ವೇಷ ಧರಿಸಿ ಕಾಸು ಕೀಳುವ ಧಂಧೆಗೆ ಇಳಿದಿದ್ದಾರೆ. ಕೆಲವೊಮ್ಮೆ ಜನರನ್ನು ಬೆದರಿಸಿ ಹಣ ಒಡವೆಗಳನ್ನು ಕಿತ್ತುಕೊಂಡಿರುವ ಘಟನೆಗಳು ನಡೆದಿವೆ. ಅದಕ್ಕಾಗಿ ಎಲ್ಲಿ ಭಕ್ಷತೆ ಕಂಡು ಬರುತ್ತೋ ಅಲ್ಲೇ ಅದರ ನುಂಗುವಿಕೆಯನ್ನು  ಬಲೆ ಹಾಕಿ ತಡೆಯಬೇಕು. ಲೈಂಗಿಕ ಅಲ್ಪಸಂಖ್ಯಾತ (ಮಂಗಳಮುಖಿ)ರಾಗಿರುವವರನ್ನು ಸೇರಿಸಿ, ಜಾಗೃತಿ ಮೂಡಿಸಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸಿ ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು.    
    ಮನುಷ್ಯನ ಹೊಟ್ಟೆಪಾಡೇನು!? ಅವನು ಅದಕ್ಕಾಗಿ ಮಾಡುತ್ತಿರುವುದೇನು!? ಮಾನವನ ನೈತಿಕತೆ ಅಧೋಗತಿಯಾಗಿದೆಯಾ!? 21ನೇ ಶತಮಾನದಲ್ಲಿ ಭಾರತದ ಸಮಾಜ ವ್ಯವಸ್ಥೆ ಗಬ್ಬುನಾರುತ್ತಿದೆಯಾ!? ಈ ಎಲ್ಲದರ ಬಗ್ಗೆ ಪ್ರಜ್ಞಾವಂತಾರಾಗಿ ನಾವು-ನೀವು ಚಿಂತಿಸಬೇಕು.
    ಅಂದು ಅಮ್ಮಾ!!!.., ತಾಯಿ!!!.., ಎಂದು ಮನೆ ಮುಂದೆ ಊಟಕ್ಕೆ ಬೇಕಾಗುವ ಅನ್ನವನ್ನೋ, ಅಕ್ಕಿಯನ್ನೋ ಬೇಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ದುಡ್ಡು ಎನ್ನುವ ಮಾಯಾಂಗನೆ ಎಲ್ಲಾ ರಂಗವನ್ನು ನರಕಕ್ಕೆ ದೂಡುತ್ತಿದೆ, ಮಾಫಿಯಾ ಎನ್ನುವ ಜಾಲ ಎಲ್ಲಾ ರಂಗದಲ್ಲೂ ಹಾಸು ಹೊಕ್ಕಾಗಿದೆ. ಸಮಾಜ ಕೆಡುತ್ತಿದೆ, ಕೆಡಿಸುತ್ತಿದೆ.
   ನಗರದ ರಸ್ತೆಗಳಲ್ಲಿ ಸಣ್ಣಪುಟ್ಟ ಮಕ್ಕಳನ್ನು ಭಯಾನಕವಾಗಿ ನಡೆಸಿಕೊಳ್ಳಲಾಗುತ್ತಿದೆ. ಫುಟ್ ಪಾತ್‍ಗಳಲ್ಲಿ ಬಿಸಿಲು ಧೂಳಿನಲ್ಲಿ ಮಕ್ಕಳನ್ನು ನಿಲ್ಲಿಸಿ ಬಿಕ್ಷೆ ಬೇಡಿಸಲಾಗುತ್ತಿದೆ. ಮಹಾನ್ ಸಿಟಿಗಳಲ್ಲೇ ನಡೆಯುವ ಈ ಬಿಕ್ಷಾ ದಂಧೆಯ ಹಿಂದೆ ಒಂದು ದೊಡ್ಡ ಮಾಯಾಜಾಲವೇ ಇದೆ ಎನ್ನುವುದು ಇವೆಲ್ಲದರ ಮೂಲಕ ನೇರವಾಗಿ ಗ್ರಾಹಿತವಾಗುತ್ತದೆ. ಪೋಲೀಸರು ಇಂತಹ  ಬಿಕ್ಷಾಟಕರ ಮೇಲೆ ತೀವ್ರ ನಿಗಾ ಇಡಲೇಬೇಕಾಗಿದೆ. ಇವೆಲ್ಲದರ ಮೂಲ ಹುಡುಕಿ ಬಹು ಬೇಗ ಸರ್ಕಾರ ಕ್ರಮಗಳನ್ನು ಕೈಗೊಳ್ಳಲೇಬೇಕು. ಇಲ್ಲವಾದರೆ ಮುಂದೊಂದು ದಿನ ಇದೇ ಇನ್ಯಾವುದೋ ಮಾಫಿಯಾ ಜಾಲಕ್ಕೆ ಕರೆದೊಯ್ದು ಮತ್ಯಾವ ಸಂಕಷ್ಟಕ್ಕೆ ಸಿಲುಕಿಸುವುದೋ ಹೇಳಲಸಾಧ್ಯ.
  ಒಟ್ಟಾರೆ ಮೇಲೆ ಹೇಳಿದಂತೆ ಬಿಕ್ಷಾಟನೆ ಎಂಬ ಧಂಧೆಯನ್ನು ನಿರ್ಮೂಲನ ಮಾಡಲು ಪೋಲೀಸರು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಕೈ ಜೋಡಿಸಿ ಪ್ರಾಮಾಣಿಕ ಕೆಲಸ ಮಾಡಬೇಕಾಗಿದೆ. ಅಲ್ಲದೇ ಸಾರ್ವಜನಿಕರಾದ ನೀವುಗಳು ಇವತ್ತಿಂದಲೇ ಬಿಕ್ಷೆ ನೀಡುವ ಗುಣವನ್ನೇ ನಿಲ್ಲಿಸಿ ಅದರ ಹಿಂದೆ ಹೋರಾಡಬೇಕಾಗಿದೆ. ಬಾಲ ನ್ಯಾಯ ಕಾಯಿದೆ ಅನ್ವಯ ಮಕ್ಕಳ ಶೋಷಣೆ, ದೌರ್ಜನ್ಯ, ಲೈಂಗಿಕ ಕಿರುಕುಳ, ಹಾಗೂ ಬಿಕ್ಷಾಟನೆಗೆ ದೂಡುವವರ ವಿರುದ್ಧ ಮೊಕದ್ದಮೆ ದಾಖಲಿಸುವ ಎಲ್ಲಾ ಸ್ವಾತಂತ್ರ್ಯವೂ ನಿಮಗೆ ಇದ್ದು, ನಿಮ್ಮ ಕಣ್ಣಿಗೆ ಇಂತಹ ಘಟನೆಗಳು ಕಂಡು ಬಂದರೆ ಶೀಘ್ರ ದೂರು ನೀಡಿ ಸಮಾಜದ ಒಳ್ಳೆಯ ಕಾರ್ಯಗಳಲ್ಲಿ ಭಾಗಿಯಾಗಬೇಕು. ಕೇವಲ ಸರ್ಕಾರ, ಸರ್ಕಾರೇತರ, ಅಧಿಕಾರಿ ಹಾಗೂ ಫೋಲಿಸ್ ವರ್ಗಗಳಿಂದ ಮಾತ್ರಾ ಇವುಗಳನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರಾದ ನಮ್ಮ-ನಿಮ್ಮ ಕೆಲಸ ಕಾರ್ಯ ಸಹಕಾರವೂ ಅತೀ ಮುಖ್ಯ. 

   
       ಕೇವಲ ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯದ ಹಲವೆಡೆ ಈ ಸಮಸ್ಯೆಗಳು ತುಂಬಿ ತುಳುಕುತ್ತಿದ್ದು, ಇವುಗಳ ಬಗ್ಗೆ ಸಂಬಂಧಿಸಿದ ಇಲಾಖೆ ಇನ್ನೂ ಹೆಚ್ಚಿನ ನಿಲುವನ್ನು ತಳೆದು ಸರಿಯಾದ ಕ್ರಮಕೈಗೊಳ್ಳಬೇಕು. ಆಗ ಮಾತ್ರಾ ಈ ಬಿಕ್ಷಾಟನೆಯ ದಂಧೆಗೆ ಕಡಿವಾಣ ಹಾಕಬಹುದು. ಏನಂತೀರಾ!?.
ಮತ್ತೇ ಎಚ್ಚಿರಿಸುತ್ತಿದ್ದೇನೆ ಇಂದಿನಿಂದಲೇ ನೀವು ಬಿಕ್ಷೆ ನೀಡುವುದನ್ನೇ ಸ್ಟಾಪ್ ಮಾಡಿ... ಯಾರೂ ಯಾರ ಜೀವನಕ್ಕೂ ನೆರವಾಗೋದು ಬೇಡ... ಅವರವರ ಹೊಟ್ಟೆ ಬಟ್ಟೆ ಅವರವರೇ ನೋಡಿಕೊಳ್ಳಲಿ...ಈ ಮೂಲಕ ನಾವು ನೀವು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಬದ್ಧರಾಗಿ, ಸಮಾಜವನ್ನು ಕೆಟ್ಟ ಕರ್ಮಗಳಿಂದ ವಿಮುಕ್ತಿಗೊಳಿಸೋಣ...

No comments:

Post a Comment