ನಿಜ! ನನಗೆ ಈ ಬರವಣಿಗೆ ಕಲಿಸಿದವಳೆ ನೀನಲ್ವಾ!? ಯಾರಿಗೆ ಯಾರು ಸ್ಫೂರ್ತಿಯಾಗುತ್ತಾರೋ ನಾ ತಿಳಿಯೇ!, ಆದರೆ ನನಗಂತೂ ನೀನೇ ಸ್ಪೂರ್ತಿ ಕಣೋ... ಅನೇಕರ ನಿರೀಕ್ಷೆಯ ಮುಂದೆ ಇಂದಿಲ್ಲಿ ನಾನು ರಹದಾರಿಯಲ್ಲಿ ಕ್ರಮಿಸಿ ಸಾಗುತ್ತಿರಬಹುದು ಆದರೆ ಒಮ್ಮೆ ಹಿಂದಿರುಗಿ ನೋಡಿದರೆ, ಅಕ್ಕಪಕ್ಕ ಇಣುಕಿ ನೋಡಿದರೆ ಸನಿಹ ಖಾಲಿ ಖಾಲಿ... ಉಳಿದಿದೆ ಒಂಟಿಪಯಣದ ಜೋಲಿ...
ಇನ್ನೇನು ಮಾಡಲಾಗದು, ಎಲ್ಲವೂ ವಿಧಿಬರಹ..! ಆ ಬರಹದಲ್ಲಿ ನೀನೊಂದು ಪಾತ್ರ..! ಅನುಕ್ಷಣವೂ ಸನಿಹವೇ ಇರುತ್ತಿಯಾ ಅಂದುಕೊಂಡ ಅಕ್ಷರಗಳಿಗೆ ಪೂರ್ಣವಿರಾಮ. ಗೀಚಲ್ಲಿ ಕಂಡಿದ್ದ ಪಾತ್ರಗಳಿಂದ ಮರೆಯಾಗಿ ಮಾಪನವೇ ಇಲ್ಲದೆ ದೂರಾಗಿ ವಿಧಿಯಲ್ಲಿ ಬರೆದಿಲ್ಲ ಎಂದು ಸಾಲನ್ನು ನುಂಗಿ ಕೊನೆಗಾಣಿಸಿವೆ ಎಂದರೆ ನೀನೊಪ್ಪುತ್ತೀಯಾ!?
ಒಂದು ಮಾತನ್ನು ಹೇಳುತ್ತೀನಿ ಕೇಳು.., ನನ್ನಯ ಪರೀಧಿಯ ಪುಸ್ತಕದಲ್ಲಿ ನೀನು ಯಾವಾಗಲೂ ಬೀಡು ಬಿಟ್ಟಿರೋ ಶಿಲಾಕಲ್ಲು. ಹತ್ತಾರು ಬಾರಿ ಮಾತನಾಡಿಸಬೇಕೆಂದರೂ, ಹೇಳಬೇಕೆಂದರೂ ಆಗದ ಒತ್ತಡಕ್ಕೆ ಸಿಲುಕಿದ ಮೂಖಪ್ರಾಣಿ ನಾನು.
ಸದ್ಯ ನಿನ್ನ ಕಾಲ್ತೊಳೆದು ಬೀಳ್ಕೊಡಬೇಕಾದ ಸಮಯ ನನ್ನಯ ಪಾಲಿಗೆ ಒದಗಿರುವುದು ಕಣ್ಣಂಚಲಿ ಹನಿ ನೀರು ಮೂಡಿಸಿದೆ. ಚಿಂತೆಯಿಲ್ಲ!!, ಕೊನೆಯ ಮಾತೆನ್ನುವಂತೆ ನೀನಾಡಿದ ಒಂದೆರಡು ಮಾತೇ ನನ್ನಯ ಇಂಪಿನ ಬಾಳ್ವೆಯ ತೆಕ್ಕೆಯಲ್ಲಿ ಪದೆ ಪದೇ ಲಹರಿಯಾಗಿ ಹರಿಯುತ್ತಲೇ ಇದೆ. ಅದೆಂದಿಗೂ ಇರುತ್ತದೆ.
ಅಳುವಿದೆ, ಬೇಜಾರಿಲ್ಲ ಅಪ್ಪಿ!.. ಎಲ್ಲಿದ್ದರೂ ಸುಖವಾಗಿರು... ಗಳೆತನಕ್ಕೆ ಪ್ರತಿ ಜನ್ಮವೂ ಜೊತೆಯಾಗಿರು...
"ಒಂದಂಕ್ಕಿ ಕಾಳಿಗೂ ನೀ ಬೇಕು ಊಟವಿಕ್ಕಲೂ,
ಪ್ರತಿ ಕ್ಷಣಗಳೂ ಕಾಯುತಿವೆ ನಿನ್ನಯ ಸೋಂಕಿಗೆ ಸೋಕಲು...
ಮೈ ರೋಮಗಳ ನಡುಗುವಿಕೆಗೆ ಭಯವಿದೆ ಇಂದಿಗೂ,
ನಲುಮೆಗಳು ಕೇಳುತಿವೆ ಇನ್ನ್ಹೇಗೆ ನಾ ಜೀವ ಪಡೆಯಲಿ ವೈಯಾರಿಸಲು...”
ಎಂದಿಗೂ ನಿನ್ನವ,
- ಸಂದೀಪ್ ಶೆಟ್ಟಿ ಹೆಗ್ಗದ್ದೆ
No comments:
Post a Comment